Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣ ವಸೂಲಿಗೆ ಪೊಲೀಸರ ಸೋಗಿನಲ್ಲೇ ಹೋದವರು ಈಗ ಕಂಬಿ ಹಿಂದೆ..!

Facebook
Twitter
Telegram
WhatsApp

ಕೊಪ್ಪಳ: ಅದೆಷ್ಟೋ ಬಾರಿ ಇಂಥ ಸುದ್ದಿಯನ್ನ ಕೇಳಿದ್ದೇವೆ. ಪೊಲೀಸರ ಸೋಗಿನಲ್ಲಿ ಬಂದು ಹಣ ಕಸಿದ ಸುದ್ದಿ, ಪೊಲೀಸರೆಂದು ಹೇಳಿಕೊಂಡು ಮೋಸ ಮಾಡಿದ ವಿಚಾರ. ಖದೀಮರು ಪೊಲೀಸರ ಹೆಸರೇಳಿಕೊಂಡೆ ಕಳ್ಳತನದ ಹಾದಿಯನ್ನ ಸುಲಭ ಮಾಡಿಕೊಂಡಿದ್ದಾರೆ. ಇದೀಗ ಅಂಥದ್ದೇ ಸುದ್ದಿಯೊಂದು ವರದಿಯಾಗಿದೆ.

ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಸಂಜಯ ಕೊಪ್ಪದ ಹಾಗೂ ಸಂಜು ಛಲವಾದಿ ಬಂಧಿತ ಆರೋಪಿಗಳು.

ಕೊಪ್ಪಳದ ಹೊರ ವಲಯದಲ್ಲಿ ಪೊಲೀಸರಂತೆ ವಾಹನಗಳನ್ನ ತಡೆದು ತಪಾಸಣೆ ಮಾಡುತ್ತಿದ್ದರು. ಸಿಕ್ಕ ಸಿಕ್ಕವರ ಬಳಿ ಹಣ ವಸೂಲಿ ಮಾಡ್ತಾ ಇದ್ರು. ಆಗಸ್ಟ್ 15 ರಂದು ಭೀಮೇಶ್ ಎಂಬುವವರ ಗಾಡಿಯನ್ನ ತಪಾಸಣೆ ನೆಪದಲ್ಲಿ ತಡೆದಿದ್ದಾರೆ. ಅದು ಇದು ಹೇಳಿ ಒಂದು ಸಾವಿರ ಹಣ ವಸೂಲಿ ಮಾಡಿದ್ದಾರೆ.‌ ಅಷ್ಟಕ್ಕೆ ಬಿಡದ ಈ ಇಬ್ಬರು ಆತನಿಂದ ಎಟಿಎಂ ಕಾರ್ಡ್, ಪಿನ್ ನಂಬರ್ ತೆಗೆದುಕೊಂಡು 1,500 ಹಣ ಡ್ರಾ ಮಾಡಿಕೊಂಡಿದ್ದಾರೆ.

ಇದಾದ ಬಳಿಕ ಭೀಮೇಶ್ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ಇವರಿಬ್ಬರ ಮೋಸ ಬಯಲಾಗಿದೆ. ಸದ್ಯ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಈ ಇಬ್ಬರನ್ನ ಬಂಧಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!