ಚಿತ್ರದುರ್ಗ, (ಆಗಸ್ಟ್30) : ನಗರದಲ್ಲಿ ಅನೇಕ ಕಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಚಾರಿ ದಟ್ಟಣೆ ಹೆಚ್ಚಾಗಿರುವುದರಿಂದ ಸುಗಮ ಸಂಚಾರದ ದೃಷ್ಟಿಯಿಂದ ಸುಗಮ ರಸ್ತೆ ಸಂಚಾರಕ್ಕಾಗಿ ನಗರದಲ್ಲಿ ಹಲವೆಡೆ ಸ್ಥಳಗಳನ್ನು ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳಗಳನ್ನು ಗುರುತಿಸಿರುವ ಪಾರ್ಕಿಂಗ್ ಸ್ಥಳಗಳಲ್ಲಿಯೇ ಸಾರ್ವಜನಿಕರು ವಾಹನಗಳನ್ನು ನಿಲುಗಡೆ (ಪಾರ್ಕಿಂಗ್) ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಕವಿತಾ ಎಸ್. ಮನ್ನಿಕೇರಿ ಆದೇಶಿಸಿದ್ದಾರೆ.
ಚಿತ್ರದುರ್ಗ ನಗರದ ವಾಹನ ನಿಲುಗಡೆ (ಪಾರ್ಕಿಂಗ್) ಸ್ಥಳಗಳ ವಿವರ:
ದ್ವಿ-ಚಕ್ರ ವಾಹನಗಳ ನಿಲುಗಡೆ ಸ್ಥಳ: ಡಿಸಿ ಸರ್ಕಲ್-ಕೋಟೆ ರಸ್ತೆಯ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಲಯದ ಕಟ್ಟಡದಿಂದ ಕೋರ್ಟ್ ಮುಂಭಾಗದಲ್ಲಿನ ತುರುವನೂರು ರಸ್ತೆ ಕ್ರಾಸ್ವರೆಗೆ (ಡಿ.ಎ.ಆರ್ ಕವಾಯತು ಮೈದಾನ ಕಡೆಗೆ)
ತಾಲ್ಲೂಕು ಕಚೇರಿ ರಸ್ತೆಯಲ್ಲಿ ವಾಸವಿ ಸರ್ಕಲ್ನಿಂದ ತಾಲ್ಲೂಕು ಕಚೇರಿ ಮುಂಭಾಗದ ಇಂದಿರಾ ಕ್ಯಾಂಟೀನ್ವರಗೆ (ಐ.ಬಿ. ಕಡೆಗೆ)
ಬಸವೇಶ್ವರ ಟಾಕೀಸ್ ರಸ್ತೆಯಲ್ಲಿ ಥಿಯೋಸಫಿಕಲ್ ಸೊಸೈಟಿ ಕಟ್ಟಡದ ಮುಂಭಾಗದ ರಸ್ತೆಯಿಂದ ಪ್ರಗತಿ ಮೆಡಿಕಲ್ ಸ್ಟೋರ್ (ಎಸ್ಬಿಎಂ ಬ್ಯಾಂಕ್ ಕಡೆಗೆ ಹೋಗುವ ರಸ್ತೆ ಕ್ರಾಸ್) ವರೆಗೂ
ಸಂತೆ ಹೊಂಡ ರಸ್ತೆಯಲ್ಲಿ ಐಯ್ಯಾಂಗರ್ ಬೇಕರಿಯಿಂದ (ಎಸ್ಬಿಎಂ ಬ್ಯಾಂಕ್ ಕಡೆಗೆ ಹೋಗುವ ಅಮೋಘ ಹೋಟಲ್ ರಸ್ತೆಯಿಂದ) ಸಂಗೀತ ಮೊಬೈಲ್ ಅಂಗಡಿ (ಮಟನ್ ಮಾರ್ಕೇಟ್ ಕ್ರಾಸ್) ವರೆಗೂ
ನಾಲ್ಕು ಚಕ್ರದ ವಾಹನಗಳ ನಿಲುಗಡೆ ಸ್ಥಳ: ರೋಟರಿ ಶಾಲೆ ರಸ್ತೆಯಲ್ಲಿ ರೋಟರಿ ಶಾಲೆ ಮುಂಭಾಗದ ಪಾರ್ಕ್ ಕಡೆಯಿಂದ ಜೆಸಿಆರ್ ಮುಖ್ಯ ರಸ್ತೆವರೆಗೆ (ಭಗತ್ ಸಿಂಗ್ ಉದ್ಯಾನವನದ ಕಡೆಗೆ) ನಾಲ್ಕು ಚಕ್ರದ ವಾಹನ ನಿಲುಗಡೆ ಮಾಡಬಹುದು.