ಸಂಕ್ರಾಂತಿ ಹಬ್ಬದಂದು ನಡೆಯಬೇಕಿದ್ದ ಹರ ಜಾತ್ರೆ ರದ್ದು..!

suddionenews
1 Min Read

ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಳವಾಗುತ್ತಿರುವ ಕಾರಣ ಜಿಲ್ಲೆಯಲ್ಲಿ ನಡೆಯಬೇಕಿದ್ದ ಹರ ಜಾತ್ರಾ ಮಹೋತ್ಸವವನ್ನ ರದ್ದುಗೊಳಿಸಲಾಗಿದೆ. ಈ ಬಗ್ಗೆ ಶ್ರೀ ವಚನಾನಂದ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.

ಇದೇ ತಿಂಗಳ 14 ಮತ್ತು 15 ರಂದು ಈ ಜಾತ್ರೆ ಪಂಚಮಸಾಲಿ ಪೀಠದಲ್ಲಿ ನಡೆಯಬೇಕಿತ್ತು. ಇದೀಗ ಕೊರೊನಾ ಹೆಚ್ಚಳದ ಹಿನ್ನೆಲೆ ಜಾತ್ರೆಯನ್ನ ರದ್ದು ಮಾಡಲು ತೀರ್ಮಾನ ಮಾಡಲಾಗಿದೆ. ವೆಂಕಯ್ಯನಾಯ್ಡು ಅವರು ಕೂಡ ಜಾತ್ರೆಯನ್ನ ಮುಂದೂಡುವಂತೆ ಸಲಹೆ ನೀಡಿದ್ದಾರೆ.

ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಟಫ್ ರೂಲ್ಸ್ ಜಾರಿ ಮಾಡಿರುವುದರಿಂದ ಜಾತ್ರೆ ಮಹೋತ್ಸವ ಎಲ್ಲಾ ಮಾಡುವ ಹಾಗಿಲ್ಲ. ಈ ಹಿನ್ನೆಲೆಯೂ ಕೂಡ ಜಾತ್ರೆಯನ್ನ ರದ್ದು ಮಾಡಲಾಗಿದೆ. ಇನ್ನು ಕೊರೊನಾ ಸೋಂಕು ಕಡಿಮೆಯಾದ ಮೇಲೆ ಜಾತ್ರೆಯ ದಿನಾಂಕವನ್ನ ನಿಗದಿ ಮಾಡಲಾಗುತ್ತದೆ ಎಂದು ಶ್ರೀಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *