ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಸ್ಥಾನವನ್ನು ನೀಡುವ ಕಾರ್ಯವನ್ನು ಬಿಜೆಪಿ ಮಾತ್ರ ಮಾಡುತ್ತದೆ :  ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ

suddionenews
1 Min Read

ಚಿತ್ರದುರ್ಗ, (ಮೇ.24) : ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನವನ್ನು ನೀಡುವ ಕಾರ್ಯವನ್ನು ಬಿಜೆಪಿ ಮಾತ್ರ ಮಾಡುತ್ತದೆ ಎಂದು ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಹೇಳಿದರು.

ನಗರದ ಜಗಲೂರು ಮಹಾಲಿಂಗಪ್ಪ ಟವರ್ಸ್‍ನಲ್ಲಿ ಹಮ್ಮಿಕೊಂಡಿದ್ದ ಬಾಜಪದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ
ಮಾತನಾಡಿ, ನಮ್ಮ ದೇಶದಲ್ಲಿ ವಾಸ ಮಾಡುವ ಜನತೆಗೆ ಪ್ರಧಾನ ಮಂತ್ರಿಗಳು ಭದ್ರೆತಯನ್ನು ನೀಡಿದ್ದಾರೆ. ಬೇರೆ ದೇಶದಲ್ಲಿ ಈ ರೀತಿಯ ಭದ್ರತೆ ಇಲ್ಲವಾಗಿದೆ. ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಬಹುತೇಕ ರಸ್ತೆಗಳು ಹಾಳಾಗಿದೆ ಇದಕ್ಕೆ ಬದಲಾಗಿ ಹತ್ತಿರದ ರೈಲ್ವೆ ನಿಲ್ದಾಣಕ್ಕೆ ಅದಿರನ್ನು ಸಾಗಿಸುವುದರ ಮೂಲಕ ಹಾಳಾಗುವ ರಸ್ತೆಯನ್ನು ತಡೆಯಬಹುದಾಗಿದೆ. ಇದರ ಬಗ್ಗೆ ಸರ್ಕಾರದ ಮಂತ್ರಿಗಳಿಗೆ ಮನವಿಯನ್ನು ಮಾಡಲಾಗಿದೆ. ಈ ರೀತಿಯಾಗಿ ರೈಲ್ವೆಯ ಮೂಲಕ ಅದಿರು ಸಾಗುವುದರಿಂದ ಸರ್ಕಾರಕ್ಕೆ ನಿಗಧಿತವಾದ ಸುಂಕ ಬರಲಿದೆ. ಅಲ್ಲದೆ ಎಷ್ಟು ಪ್ರಮಾಣದಲ್ಲಿ ಅದಿರು ಹೋಗಿದೆ ಎಂದು ಸಹಾ ಗೋತ್ತಾಗುತ್ತದೆ ಎಂದರು.

ಜಿಲ್ಲಾಧ್ಯಕ್ಷ ಮುರಳಿ, ಪ್ರಭಾರಿ ಸಹ  ಸಂಚಾಲಕ ಪ್ರೇಮ ಕುಮಾರ್, ಪ್ರದಾನ ಕಾರ್ಯದರ್ಶಿ ರಾಜೇಶ್, ನರೇಂದ್ರ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *