ಚಿಕ್ಕಬಳ್ಳಾಪುರ: ತರಗಕಾರಿಗಳಲ್ಲಿ ನುಗ್ಗೆ ಕಾಯಿ ಅಂದ್ರೆ ಎಲ್ಲರಿಗೂ ಪ್ರೀತಿದಾಯಕ. ತರಕಾರಿ ತರುವಾಗ ನುಗ್ಗೆಕಾಯಿ ಕಣ್ಣಿಗೆ ಬಿದ್ದರೆ ಬಿಟ್ಟುಬರುವ ಮಾತೇ ಇಲ್ಲ. ಆದ್ರೆ ಈಗ ಅದರ ಬೆಲೆ ಕೇಳಿದ್ರೆ ಕೈಗೆ ತೆಗೆದುಕೊಂಡವರು ವಾಪಾಸ್ ಅಲ್ಲೆ ಇಟ್ಟು ಬರುವ ಸ್ಥಿತಿ ಎದುರಾಗಿದೆ.
ಹೌದು, ದಿನೇ ದಿನೇ ಎಲ್ಲಾ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಈ ಬೆನ್ನಲ್ಲೇ ನುಗ್ಗೆಕಾಯಿ ಬೆಲೆ ಕೂಡ ಕಡಿಮೆ ಏನು ಇಲ್ಲ. ಒಂದು ಕೆಜಿಗೆ ಬರೋಬ್ಬರಿ 400 ರೂಪಾಯಿ ಆಗಿದೆ. ಬೆಲೆ ಕೇಳಿ ಗ್ರಾಹಕ ದಂಗಾಗಿದ್ದಾನೆ. ಆದ್ರೆ ಇಳುವರಿಯ ಅಭಾವ ಬೆಲೆ ಏರಿಕೆಗೆ ಕಾರಣವಾಗಿದೆ.
ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ಹಾನಿಯಾಗಿವೆ. ಅದರಲ್ಲಿ ನುಗ್ಗೆಕಾಯಿ ಕೂಡ ಹೊರತಾಗಿಲ್ಲ. ನುಗ್ಗೆಕಾಯಿಯ ಗಿಡಗಳು ಹಾಳಾದ ಹಿನ್ನೆಲೆ ಮಾರುಕಟ್ಟೆಗೆ ನುಗ್ಗೆಕಾಯಿ ಬರ್ತಾ ಇಲ್ಲ. ಆದ್ರೆ ಇದೆ ಸಮಯದಲ್ಲೇ ನುಗ್ಗೆಕಾಯಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಮಹಾರಾಷ್ಟ್ರದಿಂದ ನುಗ್ಗೆಕಾಯಿ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…