ಕೋಲಾರದಲ್ಲಿ ಬಿಜೆಪಿಗೆ ಶಕ್ತಿಯೇ ಇಲ್ಲ : ಕುಮಾರಸ್ವಾಮಿ

suddionenews
1 Min Read

 

ಕೋಲಾರ : ಪರಿಷತ್ ಚುನಾವಣಾ ಪ್ರಚಾರ ಮುಖಂಡರುಗಳಿಂದ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಗೆ ಭೇಟಿ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಪರ ಮತ ಹಾಕುವಂತೆ ಸೂಚಿಸಿದ್ದಾರೆ. ಇದೇ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ವಿರುದ್ದ ಕಿಡಿಕಾರಿದ್ದಾರೆ.

ಪಕ್ಷದ ನಾಯಕರ ಒಮ್ಮತದಿಂದ ಕಳೆದ ಬಾರಿ ಶ್ರೀನಿವಾಸಗೌಡರಿಗೆ ಟಿಕೆಟ್ ನೀಡಲಾಗಿತ್ತು. ಶಾಸಕ ಶ್ರೀನಿವಾಸಗೌಡ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡಲಿ. ಕಳೆದ ಬಾರಿ ಅನಿಲ್ ಕುಮಾರ್ ರನ್ನ ಸೋಲಿಸಿದವರೆ, ಈಗ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಅಭ್ಯರ್ಥಿ ಅನಿಲ್ ಕುಮಾರ್ ರನ್ನ ಈಗಾಗಲೇ ಬೀದಿಗೆ ತಂದು ನಿಲ್ಲಿಸಿದ್ದಾರೆ. ವೈಯಕ್ತಿಕವಾಗಿ ಏನೇ ಟೀಕೆ ಮಾಡಲಿ ನನ್ನದೇನು ಅಭ್ಯಂತರವಿಲ್ಲ. ಆದ್ರೆ ನಮ್ಮ ಪಕ್ಷದವರ ಗೆಲುವಿಗೆ ಕೆಲಸ‌ಮಾಡಲಿ.

 

ಕೋಲಾರದಲ್ಲಿ ಬಿಜೆಪಿ ಶಕ್ತಿಯೇ ಇಲ್ಲ, ಆದರು ಅಭ್ಯಯಯನ್ನ ಚುನಾವಣೆಗೆ ನಿಲ್ಲಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಹಾಕಲು ಕಾಂಗ್ರೆಸ್ ನ ಆ ಒಬ್ಬ ಮುಖಂಡನೇ ಕಾರಣ ಎಂದು ಕಿಡಿಕಾರಿದ್ದಾರೆ.

ಇನ್ನು ಇದೇ ವೇಳೆ ಬೆಳೆನಾಶದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಬೆಳೆನಾಶದ ಬಗ್ಗೆ ಸರ್ಕಾರ ನಿಖರ ಮಾಹಿತಿ ನೀಡುತ್ತಿಲ್ಲ. ಬೆಳೆಹಾನಿಗೆ ಸರ್ಕಾರ ನೀಡುವ ಪರಿಹಾರ ಸಾಕಾಗುವುದಿಲ್ಲ.‌ ಮೊದಲು ಮಾರ್ಗಸೂಚಿ, ಅದು ಇದು ಎಲ್ಲವನ್ನು ಬದಿಗಿಟ್ಟು ಮೊದಲು ಪರಿಹಾರ ನೀಡಲಿ ಎಂದು ಸಿಎಂ ಅವರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *