ಡಿಸೆಂಬರ್ 10ಕ್ಕೆ ತೆರೆಗೆ ಬರಲಿದೆ  ಹೊಸಬರ ‘ಕ್ಯಾನ್ಸೀಲಿಯಂ’ ಸಿನಿಮಾ

ಬೆಂಗಳೂರು : ಚಿತ್ರರಂಗದಲ್ಲಿ ಹೊಸಬಗೆಯ ಸಿನಿಮಾಗಳು, ಹೊಸ ಬಗೆಯ ಪ್ರಯೋಗಗಳು ನಡೆಯುತ್ತಿವೆ. ಹೊಸ ಪ್ರತಿಭೆಗಳ‌ ದಂಡೂ‌ ಸಿನಿಮಾರಂಗಕ್ಕೆ ಕಾಲಿಡುತ್ತಿದೆ. ಈ ಎಲ್ಲ ಹೊಸತುಗಳ ಪರಿಣಾಮ ಸಿನಿರಸಿಕರಿಗೆ ಬಗೆ ಬಗೆಯ ಮನರಂಜನಾತ್ಮಕ ಸಿನಿಮಾಗಳು‌ ನೋಡಲು ಸಿಗುತ್ತಿವೆ. ಅಂತಹದ್ದೇ ಹೊಸ ಪ್ರಯೋಗದ, ಹೊಸತಂಡದ, ಸಿನಿಮಾವೊಂದು ಈಗ‌ ಬಿಡುಗಡೆಯಾಗಲು ಸಕಲ ಸಜ್ಜಾಗಿ‌ ನಿಂತಿದೆ ಅದುವೇ ಕ್ಯಾನ್ಸೀಲಿಯಂ ಸಿನಿಮಾ.

ಕ್ಯಾನ್ಸೀಲಿಯಂ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಸಿನಿಮಾ. ಈ ಚಿತ್ರದ ವಿಶೇಷತೆ ಎಂದರೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ. ಕನ್ನಡದ‌ ಮಟ್ಟಿಗೆ ಇದೊಂದು‌ ಹೊಸ ಪ್ರಯೋಗ ಎನ್ನುವ ಈ ಚಿತ್ರತಂಡ ಚಿತ್ರರಂಗದಲ್ಲಿ ಮೊದಲ‌ ಬಾರಿ ತಮ್ಮನ್ನು ಸವಾಲಿಗೊಡ್ಡಿಕೊಂಡಿದೆ. ಯಾಕಂದ್ರೆ ಇಡೀ ಚಿತ್ರತಂಡಕ್ಕೆ ಸಿನಿಮಾ‌ ಇದೇ ಮೊದಲ ಅನುಭವ. ಅದ್ಹಂಗೆ ಕ್ಯಾನ್ಸೀಲಿಯಂ ಒಂದು‌ ಲ್ಯಾಟಿನ್ ಪದ. ಇದರರ್ಥ ಉದ್ದೇಶ, ಪ್ಲ್ಯಾನ್, ಸಲಹೆ ಎಂದು. ಸಿನಿಮಾ ಕಥೆಗೆ ಸೂಕ್ತವಾದ್ದರಿಂದ ಈ ಹೆಸರನ್ನೇ ಇಡಲಾಗಿದೆ ಎನ್ನುತ್ತದೆ‌ ಸಿನಿಮಾ ತಂಡ.

ಹೊಸ ಬಗೆಯ‌‌ ನಿರೂಪಣೆ, ತಾಂತ್ರಿಕ ಶ್ರೀಮಂತಿಕೆ, ಹೊಸತನ ಒಳಗೊಂಡ ಕ್ಯಾನ್ಸೀಲಿಯಂ ಸಿನಿಮಾ ಸೆಟ್ಟೇರಿದ್ದು ಮೂರು ವರ್ಷಗಳ ಹಿಂದೆ. ಸಮರ್ಥ್ ಈ ಚಿತ್ರದ ರೂವಾರಿ.‌ ಚಿತ್ರದ ಕಥೆ, ನಿರ್ದೇಶನದ‌‌ ಜವಾಬ್ದಾರಿ ಜೊತೆಗೆ ನಾಯಕ ನಟನಾಗಿ‌ ಮಿಂಚಿದ್ದಾರೆ. ಸಮರ್ಥ್ ಸಹೋದರ ಪ್ರೀತಂ ಕೂಡ ಈ ಚಿತ್ರದ ನಾಯಕ‌ನಟ. ಚಿತ್ರದಲ್ಲಿ ನಾಯಕಿಯರಾಗಿ ಖುಷಿ ಆಚಾರ್, ಅರ್ಚನಾ ನಟಿಸಿದ್ದಾರೆ.

ಇಬ್ಬರು‌ ನಾಯಕರ ಬದುಕಲ್ಲಿ ಅರಿವಿಲ್ಲದೆ ಘಟಿಸುವ ಘಟನೆಗಳು, ಅವರಿಬ್ಬರ‌ ನಡುವೆ ಏನೆಲ್ಲ ಸಮಸ್ಯೆಗಳನ್ನು ತಂದೊಡುತ್ತೆ, ಆ ಘಟನೆಗಳೆಲ್ಲ ಯಾಕೆ‌ ತಮಗೆ ಜರುಗುತ್ತಿವೆ, ಇದಕ್ಕೆಲ್ಲ‌ ಕಾರಣವೇನು ಎಂದು‌ ಹುಡುಕಲು ಹೊರಟಾಗ ತೆರೆದುಕೊಳ್ಳುವ ರೋಚಕ‌ ವಿಚಾರಗಳೇ ಸಿನಿಮಾದ ಎಳೆ. ಇದೆಲ್ಲವನ್ನು ಸೈನ್ಸ್ ಫಿಕ್ಷನ್ ಜಾನರ್ ನಡಿ‌ ರೋಚಕವಾಗಿ ಕಟ್ಟಿಕೊಡಲಾಗಿದೆ ಎನ್ನುತ್ತದೆ ಚಿತ್ರತಂಡ. ಒಟ್ಟಿನಲ್ಲಿ‌ ಒಂದು ಹೊಸ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ಉಣಬಡಿಸಲಿದೆ ಎನ್ನುವುದು‌ ಚಿತ್ರತಂಡದ ಭರವಸೆಯ‌ ಮಾತುಗಳು.

ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದು ಖುಷಿಯಲ್ಲಿರುವ ಚಿತ್ರತಂಡ‌ ಡಿಸೆಂಬರ್ 10ಕ್ಕೆ ಸಿನಿಮಾ ತೆರೆಗೆ  ತರುತ್ತಿದೆ. ಸೀತಾರಾಮ ಶಾಸ್ತ್ರಿ ಪ್ರೊಡಕ್ಷನ್ ಹೌಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ರೇಷ್ಮಾ ರಾವ್ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದು, ಸುದರ್ಶನ್ ಜಿ.ಕೆ ಛಾಯಾಗ್ರಹಣ, ದ್ವೈಪಾಯಣ
ಸಿಂಘ ಸಂಗೀತ ನಿರ್ದೇಶನವಿದೆ‌.  ಸಮರ್ಥ್, ಪ್ರೀತಂ, ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ, ಖುಷಿ ಆಚಾರ್, ಜಗದೀಶ್ ಮಲ್ನಾಡ್ ಮುಂತಾದವರ ತಾರಾಗಣ ಚಿತ್ರದಲ್ಲಿದೆ.

suddionenews

Recent Posts

ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…

5 hours ago

ದುಡಿಯುವ ಕೈಗಳಿಗೆ ಕೆಲಸ ಕೊಡಿ: ಕೂಲಿ ಕಾರ್ಮಿಕರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

6 hours ago

ಮದಕರಿಪುರ ಕೆರೆ ಹೊಳು ತೆಗೆಯುವ ಕಾರ್ಯಕ್ಕೆ ಶಾಸಕ ವಿರೇಂದ್ರ ಪಪ್ಪಿ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

6 hours ago

9ನೇ ತರಗತಿ‌ ಮಕ್ಕಳಿಗೆ ಬಂಪರ್ ಆಫರ್ ; ಬಾಹ್ಯಾಕಾಶದಲ್ಲಿ ಆಸಕ್ತಿ ಇದ್ದರೆ ಇಲ್ಲಿದೆ ಅವಕಾಶ

ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ…

6 hours ago

ದುಶ್ಚಟಗಳಿಂದ ದೂರವಿರಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ : ನಗರಸಭೆ ಅಧ್ಯಕ್ಷೆ ಸುಮಿತಾ ಕರೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

8 hours ago

ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಪಿಳ್ಳೇಕೆರೆನಹಳ್ಳಿ ಕುಮಾರ್‌ಗೆ ಶ್ರದ್ಧಾಂಜಲಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

9 hours ago