ಈ ಹಿಂದೆ ನೆಹರೂ, ಇಂದಿರಾಗಾಂಧಿ ಸುಟ್ಟು ಹೋಗಿದ್ದಾರೆ, ಮುಂದೆ ಸಿದ್ದರಾಮಯ್ಯ ಕೂಡ ಸುಟ್ಟು ಹೋಗುತ್ತಾರೆ : ನಳಿನ್ ಕಟೀಲ್ ಹೀಗೆ ಹೇಳಿದ್ಯಾಕೆ..?

suddionenews
1 Min Read

 

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸಿದ್ದರಾಮಯ್ಯ ಮೇಲೆ ಹರಿಹಾಯುವುದರ ಜೊತೆಗೆ, ನೆಹರೂ ಮತ್ತು ಇಂದಿರಾ ಗಾಂಧಿಯವರ ಬಗ್ಗೆಯೂ ಮಾತನಾಡಿದ್ದಾರೆ. ಆರ್ ಎಸ್ ಎಸ್ ಗೆ ಕೈ ಹಾಕಿದ್ದಕ್ಕೆ, ನೆಹರೂ ಹಾಗೂ ಇಂದಿರಾಗಾಂಧಿ ಸುಟ್ಟು ಹೋಗಿದ್ದಾರೆ. ಇದೀಗ, ಸಿದ್ದರಾಮಯ್ಯ ಕೂಡ ಸುಟ್ಟು ಹೋಗುತ್ತಾರೆ ಎಂದಿದ್ದಾರೆ.

ಇತ್ತಿಚೆಗೆ ಆರ್ ಎಸ್ ಎಸ್ ಚಡ್ಡಿ ಸುಡುವ ಅಭಿಯಾನ ಕೂಡ ಆರಂಭವಾಗಿತ್ತು. ಸಿದ್ದರಾಮಯ್ಯ ಅವರು ಕೂಡ ಚಡ್ಡಿ ಸುಡುವ ಬಗ್ಗೆ ಹೇಳಿದ್ದರು. ಈ ಹೇಳಿಕೆಗೆ ಕಿಡಿಕಾರಿರುವ ನಳಿನ್ ಕುಮಾರ್ ಕಟೀಲು, ಆರ್ ಎಸ್ ಎಸ್ ಚಡ್ಡಿ ಸುಡಿ ಎಂದು ಹೇಳುವ ಸಿದ್ದರಾಮಯ್ಯ ಅವರು ಸುಟ್ಟು ಹೋಗುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಬೆಂಕಿ ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ಆರ್ ಎಸ್ ಎಸ್ ಒಂದು ಸೇವಾ ಸಂಸ್ಥೆ. ಅಲ್ಲಿ ದೇಶಭಕ್ತರನ್ನು ನೊರ್ಮಾಣ ಮಾಡುತ್ತದೆ. ಇದಕ್ಕೆ ಕೈ ಹಾಕಿದ್ದ ನೆಹರೂ ಮತ್ತು ಇಂದಿರಾ ಗಾಂಧಿಯವರು ಸುಟ್ಟು ಹೋಗಿದ್ದಾರೆ. ಕಾಂಗ್ರೆಸ್ ಬೆಂಕಿಗೆ ಕೈ ಹಾಕಿದೆ. ಕಾಂಗ್ರೆಸ್ ಹಿಂದೂಗಳ ಮತ ಬೇಡ ಎಂಬ ಹಂತಕ್ಕೆ ಬಂದು ನಿಂತಿದೆ. ಜೆಡಿಎಸ್ ಮುಸ್ಲಿಂ ಮತಗಳನ್ನು ಒಲೈಕೆ ಮಾಡಲು ಸಿದ್ದರಾಮಯ್ಯ ನಿಂತಿದ್ದಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *