ಜಾತಿ ನೋಡಿ ನೀರು ಕೊಟ್ಟಿಲ್ಲ, ಬಾತ್ ರೂಮ್ ಹೋಗಲು ಬಿಟ್ಟಿಲ್ಲ : ಏನಿದು ಮಹಾರಾಷ್ಟ್ರ ಸರ್ಕಾರದ ಮೇಲೆ ಆರೋಪ..!

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ನವನೀತ್ ರಾಣಾ ಮತ್ತು ಅವರ ಪತಿಯನ್ನು ಪೊಲೀಸರು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಅವರನ್ನು ಬಾತ್ ರೂಮ್ ಗೆ ಹೋಗುವುದಕ್ಕು ಬಿಡುತ್ತಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಧ್ವನಿವರ್ಧಕದ ವಿಚಾರವಾಗಿ ಹನುಮಾನ್ ಚಾಲೀಸಾ ಪಠಣದ ಬಗ್ಗೆಯೂ ಸದ್ದು ಜೋರಾಗಿತ್ತು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆ ಮುಂದೆ ಸಂಸದೆ ನವನೀತ್ ರಾಣಾ ಹಾಗೂ ಪತಿ ಶಾಸಕ ರವಿ ರಾಣಾ ಹನುಮಾನ್ ಚಾಲಿಸಾ ಪಠಿಸಲು ಪ್ರಯತ್ನ ನಡೆಸಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಿರುವ ಮಹಾರಾಷ್ಟ್ರ ಸರ್ಕಾರ, ದೇಶದ್ರೋಹ ಕೇಸ್ ಹಾಕಿದೆ. ಸದ್ಯ ನ್ಯಾಯಾಲಯದ ಬಂಧನದಲ್ಲಿದ್ದಾರೆ.

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿರುವ ಫಡ್ನವಿಸ್, ಅವರ ಜೊತೆ ಅಧಿಜಾರಿಗಳು ಜೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ಮಾಡಿದ ತಪ್ಪಾದರೂ ಏನು..? ಸಿಎಂ ಮನೆ ಮುಂದೆ ಹನುಮಾನ್ ಚಾಲೀಸ ಪಠಿಸಲು ಹೋಗಿದ್ದರು. ಈ ವೇಳೆ ಸಾವಿರಾರು ಕಾರ್ಯಕರ್ತರನ್ನು ಬಿಟ್ಟು, ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದವರಂತೆ ವರ್ತಿಸುತ್ತಿದ್ದಾರೆ.

ನ್ಯಾಯಾಂಗ ಬಂಧನದಲ್ಲಿರೋ ದಲಿತ ಮಹಿಳೆ ನವನೀತ್ ರಾಣಾಗೆ ಕುಡಿಯಲು ನೀರು ಕೊಟ್ಟಿಲ್ಲ. ಅವರ ಜಾತಿ ನೋಡಿ ನೀರು ಕೊಟ್ಟಿಲ್ಲ. ಮಹಿಳೆ ಮೇಲೆ ದೌರ್ಜನ್ಯವಾಗಿದೆ. ದೇಶದ್ರೋಹ ಕೇಸ್ ಹಾಕಿದ್ದಾರೆ. ಪೊಲೀಸ್ ಕಸ್ಟಡಿಯಲ್ಲೂ ಸರಿಯಾಗಿ ನಡೆಸಿಕೊಂಡಿಲ್ಲ. ಅವರಿಗೆ ಜಾತಿ ನಿಂದನೆ ಮಾಡಲಾಗಿದೆ. ಬಾತ್ ರೂಮ್ ಗೆ ಹೋಗಲು ಬಿಟ್ಟಿಲ್ಲ. ಅವರೊಬ್ಬರು ಸಂಸದೆ ಅವರಿಗೆ ಈ ಸ್ಥಿತಿಯಾದರೆ ಇನ್ನು ಸಾಮಾನ್ಯ ಜನರ ಸ್ಥಿತಿ ಏನಾಗಬೇಕು ಎಂದು ಠಾಕ್ರೆ ವಿರುದ್ಧ ಕೆಂಡಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *