ಶುದ್ದ ಗಾಳಿಯ ಊರು ಎಂಬ ಪಟ್ಟ ಪಡೆದಿದೆ ಶಾಸಕ ಯತ್ನಾಳ್ ಜಿಲ್ಲೆ..!

 

ವಿಜಯಪುರ: ಜಿಲ್ಲೆಯನ್ನು ಹೆಚ್ಚಾಗಿ, ಧೂಳಿನ ನಗರ, ಬರಗಾಲದ ನಗರ ಎಂದೆಲ್ಲಾ ಹೆಸರು ಇದೆ. ಜನ ಕೆಲಸಕ್ಕಾಗಿ ಬೇರೆ ಕಡೆಗೆ ಹೋಗುತ್ತಿದ್ದಾರೆ. ಇಂಥ ನಗರ ಇದೀಗ ಶುದ್ಧ ಗಾಳಿಯ ನಗರವೆಂದು ಹೆಸರು ಬಂದಿದೆ. ಶುದ್ಧ ಗಾಳಿ ಇರುವ ನಗರದ ಪಟ್ಟಿಯಲ್ಲಿ ವಿಜಯಪುರ ಸ್ಥಾನ ಪಡೆದಿದೆ. ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶದಲ್ಲಿ ವಿಜಯಪುರ ನಗರಕ್ಕೆ 6ನೇ ಸ್ಥಾನ ಪಡೆದಿದೆ.

ಈ ಬಗ್ಗೆ ಮಾತನಾಡಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಹಿಂದೆ ವಿಜಯಪುರವನ್ನು ಧೂಳಾಪುರ ಎನ್ನಲಾಗುತ್ತಿತ್ತು. ವಿವಿಧ ಅಭಿವೃದ್ಧಿಯಿಂದ ಇದೀಗ ವಿಜಯಪುರ ಅಭಿವೃದ್ಧಿ ನಗರವಾಗಿದೆ. ನಗರದಲ್ಲಿನ ಧೂಳಿನ ಪರಿಸ್ಥಿತಿಯಿಂದ ಜನ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಈಗ ಜನರ ಕಾಯಿಲೆಗಳು ದೂರವಾಗಿವೆ. ಈಗ ಆರೋಗ್ಯವಂತ ನಗರವಾಗಿದೆ ಎಂದಿದ್ದಾರೆ.

ಇನ್ನು ಶಾಸಕರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಸ್ತೆಗಳೆಲ್ಲಾ ಅಭಿವೃದ್ಧಿ ಹೊಂದಿವೆ, ಎಲ್ಲೆಂದರಲ್ಲಿ ಬೀಳುತ್ತಿದ್ದ ಕಸಕ್ಕೆ ಮುಕ್ತಿ ಸಿಕ್ಕಿದೆ. ಮಾಲಿನ್ಯವೂ ಮಾಯವಾಗಿದೆ. ಹೀಗಾಗಿಯೇ ವಿಜಯಪುರದಲ್ಲಿ ಶುದ್ಧಗಾಳಿ ಸಿಗುತ್ತಿದೆ. ಈ ಬೆನ್ನಲ್ಲೇ ಶುದ್ಧಗಾಳಿಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

suddionenews

Recent Posts

ಭಾರತ – ಪಾಕ್ ಪಂದ್ಯಕ್ಕೆ ಕ್ಷಣಗಣನೆ : ಗೆದ್ದು ಬಾ ಇಂಡಿಯಾ : ಗೆಲುವಿಗಾಗಿ ವಿಶೇಷ ಪೂಜೆ…!

ಇಂದು ಭಾರತ ವರ್ಸಸ್ ಪಾಕ್ ಪಂದ್ಯ ನಡೆಯಲಿದೆ. ಸಾಂಪ್ರಾದಾಯಿಕ ವೈರಿಗಳನ್ನು ಕಟ್ಟಿ ಹಾಕಲು ಭಾರತ ತಂಡ ಸಜ್ಜಾಗಿದೆ. ಈ ಪಂದ್ಯವನ್ನ…

13 minutes ago

IND vs PAK: ಕೆಲಹೊತ್ತಿನಲ್ಲಿ ಭಾರತ-ಪಾಕ್ ಪಂದ್ಯ : ದುಬೈನಲ್ಲಿ ಹವಾಮಾನ ಹೇಗಿದೆ ? ಪಿಚ್ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ…!

ಸುದ್ದಿಒನ್ : ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಇಂದು ಮಧ್ಯಾನ್ಹ 2.30 ಕ್ಕೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ vs ಪಾಕಿಸ್ತಾನ…

3 hours ago

ಒಂದು ಕಪ್ ಬ್ಲಾಕ್ ಕಾಫಿಯಿಂದ ಹಲವು ಆರೋಗ್ಯ ಪ್ರಯೋಜನಗಳು..!

  ಸುದ್ದಿಒನ್ ಬ್ಲಾಕ್ ಕಾಫಿ ಹೃದಯದ ಆರೋಗ್ಯವನ್ನು ರಕ್ಷಿಸುವುದಲ್ಲದೆ, ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.…

4 hours ago

ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ

ಈ ರಾಶಿಯವರಿಗೆ ವ್ಯಾಪಾರದಲ್ಲಿ ತುಂಬಾ ಅಡಚಣೆ, ಈ ರಾಶಿಗಳ ಮದುವೆಗೆ ತುಂಬಾ ಅಡಚಣೆ, ಭಾನುವಾರ ರಾಶಿ ಭವಿಷ್ಯ 23 ಫೆಬ್ರವರಿ…

7 hours ago

ಚಿತ್ರದುರ್ಗ : ನಾಲ್ವರು ಶ್ರೀಗಂಧದ ಕಳ್ಳರ ಬಂಧನ : 7.78 ಲಕ್ಷ ಮೌಲ್ಯದ ಶ್ರೀಗಂಧ ವಶಕ್ಕೆ

    ಸುದ್ದಿಒನ್, ಹಿರಿಯೂರು, ಫೆಬ್ರವರಿ. 22 : ಅಬ್ಬಿನಹೊಳೆ ಮತ್ತು ಹೊಸದುರ್ಗ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಶ್ರೀಗಂಧ…

15 hours ago