ಸಚಿವರಿಂದಾಗದ ಕೆಲಸವನ್ನ ಶಾಸಕಿ ಮಾಡಿದ್ದಾರೆಂಬ ಸಂತೋಷವಿಲ್ಲ : ಶಾಸಕ ಸುಧಾಕರ್ ಮೇಲೆ ಪೂರ್ಣಿಮಾ ಕಿಡಿ 

suddionenews
1 Min Read

 

ಚಿತ್ರದುರ್ಗ : ಮೊನ್ನೆಯಷ್ಟೇ ನಡೆದ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಸಚಿವ ಸುಧಾಕರ್ ಕೂಡ ಭಾಗಿಯಾಗಿದ್ದರು. ಭಾಷಣ ಮಾಡುವಾಗ ಶಾಸಕಿ ಪತಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದರು. ಆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಪೂರ್ಣಿಮಾ, ಕ್ಷೇತ್ರದ ಜನತೆ ನಿಮಗೆ ಹತ್ತು ವರ್ಷಗಳ ಕಾಲ ಆಡಳಿತ ನೀಡಿದ್ದರು. ಆದ್ರೂ ಜಿಲ್ಲೆಗೊಂದು ಸುಸಜ್ಜಿತವಾದ ಆಸ್ಪತ್ರೆ ತರಲು ನಿಮ್ಮಿಂದ ಸಾಧ್ಯವಾಗಲಿಲ್ಲ. ಸಚಿವರು ಮಾಡದ ಕೆಲಸವನ್ನ ಶಾಸಕರು ಮಾಡ್ತಿದ್ದಾರೆ. ಇದನ್ನ ಜನತೆಗೆ ತಿರುಚಿ ಹೇಳುತ್ತಿದ್ದಾರೆ. ಸಚಿವ ಸುಧಾಕರ್ ಅವರು ಜನತೆಗೆ ಏನಾದರೂ ಹೇಳಬೇಕಲ್ಲ ಅದಕ್ಕಾಗಿ ಹೇಳುತ್ತಿದ್ದಾರೆ.

ಕ್ಷೇತ್ರದ ಜನರು ಕೂಡ ಎಲ್ಲವನ್ನ ಗಮನಿಸುತ್ತಿದ್ದಾರೆ. ನಗರದಲ್ಲಿರುವ 100 ಬೆಡ್ ಗಳ ಆಸ್ಪತ್ರೆ ನೆಪಕ್ಕೆ ಮಾತ್ರ ಇದೆ. ಆದ್ರೆ ಅದರಲ್ಲಿ ಯಾವುದೇ ಮೂಲಭೂತ ಸೌಲಭ್ಯವಿಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಹೀಗಿರುವಾಗ ನಾನು ಒಂದು ಸುಸಜ್ಜಿತ ಆಸ್ಪತ್ರೆ ಮಾಡಲು ಹೊರಟಾಗ ಹೀಗೆಲ್ಲಾ ಹೇಳ್ತಾ ಇದ್ದಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ತಂದಿದ್ದಾರೆ ಎಂಬ ಸಂತೋಷಕ್ಕಿಂತ ಕೆಟ್ಟ ಸಂದೇಶ ಹಬ್ಬಿಸಿ ಪ್ರಚಾರ ಪಡೆಯುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *