ನಾಡಗೀತೆ ವೇಳೆ ಕ್ಯಾಪ್ ತೊಡದ ಅಧಿಕಾರಿಗಳು : ಕ್ಲಾಸ್ ತೆಗೆದುಕೊಂಡ ಶಾಸಕ..!

suddionenews
0 Min Read

 

ಶಿವಮೊಗ್ಗ: ಇಂದು ಹೊಸನಗರದ ತಾ. ಪಂ ಕಚೇರಿಯಲ್ಲಿ ಕೆಡಿಪಿ ಸಭೆ ನಡೆಸಲಾಗಿದೆ. ಈ ವೇಳೆ ಸಭೆ ಆರಂಭಕ್ಕೂ ಮುನ್ನ ನಾಡಗೀತೆ ಹಾಡಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ನಡೆದುಕೊಂಡ ರೀತಿಗೆ ಶಾಸಕ ಹರತಾಳು ಹಾಲಪ್ಪ ಗರಂ ಆಗಿದ್ದಾರೆ.

ನಾಡಗೀತೆ ಹೇಳುವಾಗ ಅಧಿಕಾರಿಗಳು ಸಮವಸ್ತ್ರ ಕ್ಯಾಪ್ ಧರಿಸಿರಲಿಲ್ಲ. ಹೀಗಾಗಿ ನಾಡಗೀತೆ ಮುಗಿದ ಬಳಿಕ ಶಾಸಕ ಹರತಾಳ್ ಹಾಲಪ್ಪ ಅವರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಕ್ಯಾಪ್ ಕೊಟ್ಟಿದ್ದಾದರೂ ಯಾತಕ್ಕೆ..? ನಾಡಗೀತೆ ಸಮಯದಲ್ಲಿ ಕ್ಯಾಪ್ ಧರಿಸಬೇಕೆಂಬುದು ನಿಮಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *