ಮಾಜಿ ಸಿಎಂ ಬಗ್ಗೆ ಭಾವುಕರಾದ ಸಚಿವ ಈಶ್ವರಪ್ಪ..!

suddionenews
1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ ಭಾವುಕರಾಗಿದ್ದಾರೆ. ಮಾಜಿ ಸಿಎಂ ಬಿ‌ ಎಸ್ ಯಡಿಯೂರಪ್ಪ ಅವರ ಬಗ್ಗೆ ಭಾವುಕರಾಗಿ ನುಡಿದಿದ್ದಾರೆ.

ಬಿಎಸ್ವೈ ವಿರುದ್ಧ ಗುಂಪುಗಾರಿಕೆ ಮಾಡುವುದು, ಅವರ ವಿರುದ್ಧ ಮಾತನಾಡುವುದು ತಂದೆ ತಾಯಿಗೆ ದ್ರೋಹ ಬಗೆದಂತೆ. ನಾನಿವತ್ತು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯೋದಕ್ಕೆ ಕಾರಣ ಒಂದು ಕಡೆ ಸಂಘವಾದರೆ ಮತ್ತೊಂದು ಕಡೆ ಯಡಿಯೂರಪ್ಪನವರು ಕಾರಣ. ನಾನೇನಾದರೂ ಯಡಿಯೂರಪ್ಪ ವಿರುದ್ಧ ಗುಂಪು ಕಟ್ಟಿದರೆ, ಅದು ನಮ್ಮ ತಂದೆ ತಾಯಿಗೆ ಅವರಿಗೆ ಮಾಡಿದ ದ್ರೋಹದಂತೆ ಎಂದಿದ್ದಾರೆ.

ನಮ್ಮಲ್ಲಿ ಯಾವುದೇ ಬಣವಿಲ್ಲ. ಒಮ್ಮೊಮ್ಮೆ ಮಾಧ್ಯಮದಲ್ಲಿ ಯಡಿಯೂರಪ್ಪ ಬಣ, ಈಶ್ವರಪ್ಪ ಬಣವೆಂದು ಬರುತ್ತೆ. ಆದರೆ ಅದೆಲ್ಲ ಸುಳ್ಳು. ನಂಗೆ ಯಡಿಯೂರಪ್ಪ ಅವರ ಮೇಲೆ ಗೌರವವಿದೆ. ಅವರಿಗೆ ಯಾವತ್ತು ದ್ರೋಹ ಬಗೆಯುವುದಿಲ್ಲ ಎಂದು ಸಚಿವ ಈಶ್ವರಪ್ಪ ಯಡಿಯೂರಪ್ಪ ಪರ ಭಾವುಕರಾಗಿ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *