ಸಿದ್ದರಾಮಯ್ಯ ಮುಳುಗುವ ಹಡಗಿ ಎಂದ ಮೀನುಗಾರಿಕಾ ಬಂದರು ಸಚಿವ ಅಂಗಾರ..!

suddionenews
1 Min Read

 

ಉಡುಪಿ: ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರಿಂದ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮೀನುಗಾರಿಕಾ ಬಂದರು ಸಚಿವ ಎಸ್ ಅಂಗಾರ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಮುಳುಗುವ ಹಡಗು. ಅದಕ್ಕೆ ಈ ರೀತಿ ಮಾತಾಡ್ತಿದ್ದಾರೆ ಎಂದಿದ್ದಾರೆ.

 

ಸಿದ್ದರಾಮಯ್ಯ ಮುಳುಗುವ ಸ್ಥಿತಿಯಲ್ಲಿರುವ ಕಾರಣ ಅವರಿಗೆ ಎಲ್ಲರು ಮುಳುಗಿದಂತೆ ಕಾಣುತ್ತಿರಬಹುದು. ಅವರಲ್ಲಿ ಸ್ಪಷ್ಟತೆ ಇಲ್ಲ. ಆದ್ರೆ ಬಿಜೆಪಿ ನಾಯಕರಿಗೆ ಸ್ಪಷ್ಟತೆಯೂ ಇದೆ, ವಿಚಾರಧಾರೆಯೂ ಇದೆ. ಏನ್ ಬೇಕಾದರೂ ಅಫ್ರಚಾರ ಮಾಡಬಹುದು. ನಾಳೆ ನಾನ್ ಕೂಡ ಡಿಕೆಶಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಬಹುದು.

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ನಾಳೆ ಅಂಗಾರ ಬಗ್ಗೆಯೂ ಬರಬಹುದು. ಆದ್ರೆ ಅಂಗಾರ ಏನು ಎಂಬುದು ಜನರಿಗೆ ಗೊತ್ತಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಕೊಡೋದು ಬೇಡ. ನಮ್ಮ ತಪ್ಪುಗಳಿಗೆ ಸಂಘಟನೆ ಹೊಣೆಯಾಗುವುದಿಲ್ಲ. ಸಂಘಟನೆಗೆ ನಿಷ್ಠರಾಗಿದ್ದರೆ, ಸಂಘಟನೆ ಯಾವತ್ತು ನಮ್ಮ ಕೈಬಿಡುವುದಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *