ಬೆಂಗಳೂರು: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮಿತಿಮೀರಿದೆ. ಗ್ರಾಮೀಣ ಭಾಗದ ಜನರನ್ನೇ ಟಾರ್ಗೆಟ್ ಮಾಡುವ ಫೈನಾನ್ಸ್ ಕಂಪನಿಗಳು ಸಾಲ ಸೌಲಭ್ಯವನ್ನು ಸುಲಭವಾಗಿ ಕೊಟ್ಟು ಬಿಡುತ್ತಾರೆ. ಕಟ್ಟುವುದಕ್ಕೆ ತಡವಾದರೆ ಮನೆ ಮುಂದೆ ಹೋಗಿ ಗಲಾಟೆ ಮಾಡುವುದು, ಮರ್ಯದೆ ತೆಗೆಯುವ ರೀತಿ ನಡೆದುಕೊಳ್ಳುವುದು ಹಾಗೇ ಮನೆಗೆ ಬೀಗವನ್ನೆ ಜಡಿದು ಬರುವ ಕೆಲಸವನ್ನು ಮಾಡುತ್ತಿದ್ದಾರೆ. ಇದರಿಂದ ಅದೆಷ್ಟೋ ಜನ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ. ಫೈನಾನ್ಸ್ ಉಪಟಳ ಜಾಸ್ತಿಯಾದಾಗ ಸರ್ಕಾರ ಇದಕ್ಕೆ ಕಾನೂನಿನ ಮೂಲಕ ಕಂಟ್ರೋಲ್ ಗೆ ತರುವುದಕ್ಕೆ ತೀರ್ಮಾನಿಸಿತ್ತು.
ಅಧಿಕಾರಿಗಳ ಜೊತೆಗೆ ಕೂತು ಚರ್ಚೆ ಮಾಡಿ, ಫೈನಾನ್ಸ್ ಕಂಪನಿಗಳ ಉಪಟಳ ತಪ್ಪಿಸಲು ಸುಗ್ರಿವಾಜ್ಞೆ ಹೊರಡಿಸಲು ನಿರ್ಧರಿಸಿದ ಸರ್ಕಾರ, ಅನುಮೋದನೆಯನ್ನು ರಾಜ್ಯಪಾಲರಿಗೆ ನೀಡಿತ್ತು. ಆದರೆ ಸುಗ್ರಿವಾಜ್ಞೆಯಲ್ಲಿ ಒಂದಷ್ಟು ಬದಲಾವಣೆಗಳು ಆಗಬೇಕೆಂದ ರಾಜ್ಯಪಾಲರು ಸಹಿ ಹಾಕದೆ ವಾಪಸ್ ಕಳುಹಿಸಿದ್ದರು. ಇದೀಗ ಸುಗ್ರಿವಾಜ್ಞೆಗೆ ರಾಜ್ಯಪಾಲರಿಂದ ಅನುಮೋದನೆ ಸಿಕ್ಕಿದೆ.
ಕಡೆಗೂ ರಾಜ್ಯಪಾಲರು ಸುಗ್ರಿವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದಾರೆ. ಅನುಮೋದನೆಗೆ ಸಹಿ ಹಾಕಿದ್ದಾರೆ. ಸುಗ್ರಿವಾಜ್ಞೆ ಮೂಲಕ ಇನ್ಮುಂದೆ ಸರ್ಕಾರವೂ ಮೈಕ್ರೋ ಫೈನಾನ್ಸ್ ಗಳಿಗೆ ಕಡಿವಾಣ ಹಾಕಲಿದೆ. ಸುಲಭವಾಗಿ ಹಣ ಕೊಟ್ಟು, ಜನರ ಪ್ರಾಣ ತಿನ್ನುತ್ತಿದ್ದ ಕಂಪನಿಗಳಿಗೆ ಬಿಸಿ ಮುಟ್ಟಿಸಲಿದೆ. ಸರ್ಕಾರ ನಿಯಮಗಳನ್ನು ಪಾಲಿಸದೆ ಹೋದಲ್ಲಿ ಲೈಸೆನ್ಸ್ ಅನ್ನು ರದ್ದು ಮಾಡುವ ಸಾಧ್ಯತೆ ಇದೆ. ಪೊಲೀಸ್ ಠಾಣೆಯಲ್ಲಿ ಕಿರುಕುಳ ಅನುಭವಿಸಿದವರು ದೂರು ದಾಖಲಿಸಬಹುದು. ಪೊಲೀಸರು ಕೂಡ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುವುದಕ್ಜೆ ಅವಕಾಶ ಇರುವ ಬಗ್ಗೆ ಸುಗ್ರಿವಾಜ್ಞೆಯಲ್ಲಿದೆ. ಇನ್ನಾದರೂ ಮೈಕ್ರೋ ಫೈನಾನ್ಸ್ ಕಿರುಕುಳ ಹತೋಟಿಗೆ ಬರುತ್ತಾ ಎಂಬುದನ್ನು ನೋಡಬೇಕಿದೆ.p
ಚಿತ್ರದುರ್ಗ. ಫೆ.12: ದ್ವಿಚಕ್ರ ವಾಹನ ಸವಾರರು ಪ್ರತಿಯೊಬ್ಬರೂ ಕೂಡ ಜೀವ ರಕ್ಷಣೆ ಸಂಬಂಧ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ವಾಹನ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ: ನಿಧಿ ಆಸೆ ಎಂಬುದು ಜನರಲ್ಲಿ ಇನ್ನು ಹೋಗಿಲ್ಲ. ಹೂತಿಟ್ಟಿರುವ ನಿಧಿ ಸಿಕ್ಕರೆ ಶ್ರೀಮಂತರಾಗಿ ಬಿಡಬಹುದು ಎಂಬ ಬಯಕೆ. ನಿಧಿ…
ಕಾಲ ಈಗ ಅದೆಷ್ಟು ಬದಲಾಗಿದೆ ಅಲ್ವಾ. ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಮೂಗು ಮುರಿಯುತ್ತಿದ್ದರು. ಗಂಡು ಮಗುವೇ ಬೇಕು ಎನ್ನುತ್ತಿದ್ದರು.…
ಬೆಂಗಳೂರು: ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಇದನ್ನು ಕಂಡ ಚಿನ್ನಾಭರಣ ಪ್ರಿಯರು ಇಳಿಕೆಯಾಗುತ್ತೋ ಇಲ್ವೋ ಅಂತ…