ಮೆಂಟಲ್ ಆಸ್ಪತ್ರೆಯಲ್ಲಿರಬೇಕಾದವರು ಮಾತಾಡ್ತಾ ಇದ್ದಾರೆ : ಸೊಗಡು ಬಗ್ಗೆ ಡಿಕೆಶಿ ಗರಂ

suddionenews
1 Min Read

ಬೆಂಗಳೂರು: ಸಲೀಂ ಹಾಗೂ ಉಗ್ರಪ್ಪ ಮಾತಾಡಿರೋದು ಸತ್ಯ ಅಂತ ಸೊಗಡು ಶಿವಣ್ಣ ಡಿಕೆಶಿ ವಿರುದ್ಧ ಹರಿಹಾಯ್ದಿದ್ರು. ಇದೀಗ ಅದೇ ವಿಚಾರಕ್ಕೆ ಡಿಕೆ ಶಿವಕುಮಾರ್ ಸೊಗಡು ಶಿವಣ್ಣ ಬಗ್ಗೆ ತಿರುಗಿ ಬಿದ್ದಿದ್ದಾರೆ. ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ನಿವಾಸದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ರಾಜಕೀಯವಾಗಿ ಜಾಗವಿಲ್ಲದೆ ಅಲೆದಾಡುತ್ತಿದ್ದಾರೆ. ಮೊದಲು ಆ ಜಾಗ ಹುಡುಕಿಕೊಳ್ಳಲಿ. ಮೆಂಟಲ್ ಆಸ್ಪತ್ರೆಯಲ್ಲಿ ಇರಬೇಕಾದವರು ಮಾತಾಡ್ತಾ ಇದ್ದಾರೆ. ಮೊದಲು ಅವರನ್ನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂ.ಎ.ಸಲೀಂ ಮತ್ತು ಉಗ್ರಪ್ಪ ಮಾತನಾಡಿರುವುದು ಸತ್ಯ. ಡಿಕೆಶಿ ರೀಟೇಲ್ ವ್ಯಾಪಾರಿಯಲ್ಲ, ಹೋಲ್ ಸೇಲ್ ವ್ಯಾಪಾರಿ, ಬೇನಾಮಿ ಹೆಸರಿನಲ್ಲಿ ಬೇಕಾದಷ್ಟು ಆಸ್ತಿ ಮಾಡಿಕೊಂಡಿದ್ದಾರೆ. ಡಿಕೆಶಿ ತುಮಕೂರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆಂದು ಸೊಗಡು ಶಿವಣ್ಣ ಹೇಳಿದ್ರು. ಅದಕ್ಕೆ ತಿರುಗೇಟು ನೀಡಿರುವ ಡಿಕೆಶಿ, ಯಾವುದಾದರೂ ಆಸ್ತಿ ಇದ್ದರೆ ಅವನೇ ಮಾಡ್ಕೊಳ್ಳಿ, ಅವನಿಗೆ ಎಲ್ಲಾ ಗಿಫ್ಟ್ ಕೊಟ್ಟು ಬಿಡ್ತೀನಿ. ರಾಜಕೀಯ ವಾಗಿ ಅವನಿಗೆ ಜಾಗ ಇಲ್ಲ ಹೀಗಾಗಿ ಮಾತಾಡ್ತಿದ್ದಾನೆ. ಮೊದಲು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *