ಸಾಂಸ್ಕೃತಿಕ ಮನೋರಂಜನೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ : ಗಾಯಕಿ ಜ್ಯೋತಿ ರವಿಪ್ರಕಾಶ್

suddionenews
1 Min Read

ಚಿತ್ರದುರ್ಗ : ಜಾನ್ಹವಿ ಗ್ರೂಪ್ಸ್, ರಮಣೀಯ ಕ್ರಿಯೇಷನ್ಸ್ ವತಿಯಿಂದ ಐ.ಎಂ.ಎ.ಹಾಲ್‍ನಲ್ಲಿ ದಸರಾ ದಾಂಡಿಯಾ ಉತ್ಸವ ಡಾನ್ಸ್ ಡಿಜೆ ಮೆಹಂದಿ ಏರ್ಪಡಿಸಲಾಗಿತ್ತು.

ಖ್ಯಾತ ಗಾಯಕಿ ಜ್ಯೋತಿ ರವಿಪ್ರಕಾಶ್ ದಸರಾ ದಾಂಡಿಯಾ ಉತ್ಸವ ಉದ್ಘಾಟಿಸಿ ಮಾತನಾಡುತ್ತ ಡಾನ್ಸ್ ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸ್ಸಿಗೆ ಮುದನೀಡುತ್ತವೆ. ಮುಂದುವರೆದ ವೈಜ್ಞಾನಿಕ ಯುಗದಲ್ಲಿ ಒತ್ತಡ ಜೀವನದ ನಡುವೆ ಇಂತಹ ಮನೋರಂಜನೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಜಾನ್ಹವಿ ಗ್ರೂಪ್ಸ್‍ನ ಅಮೃತ ಸಂತೋಷ್, ರಮಣೀಯ ಕ್ರಿಯೇಷನ್ಸ್‍ನ ನಿತಿನ್, ಗಾಯಕಿ ಅಂಜಲಿ, ಜಾವಿದ್, ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷರುದ್ರಸ್ವಾಮಿ, ಕಾರ್ಯದರ್ಶಿ ಲತ ಉಮೇಶ್, ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಂ ವೇದಿಕೆಯಲ್ಲಿದ್ದರು.

ದಸರಾ ದಾಂಡಿಯಾ ಉತ್ಸವದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್‍ಗಳನ್ನು ವಿತರಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *