Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡಿಕೆ ಶಿವಕುಮಾರ್ ಹೇಳಿಕೆಗೆ ಎಂ ಬಿ ಪಾಟೀಲ್ ಫುಲ್ ಗರಂ…!

Facebook
Twitter
Telegram
WhatsApp

 

ಬೆಂಗಳೂರು: ಸಚಿವ ಅಶ್ವತ್ಥ್ ನಾರಾಯಾಣ್ ಮತ್ತು ಎಂ ಬಿ ಪಾಟೀಲ್ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಇದು ರಕ್ಷಣೆಗಾಗಿ ನಡೆದ ಭೇಟಿ ಎಂದಿದ್ದರು. ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಂ ಬಿ ಪಾಟೀಲ್, ನಮ್ಮ ಅಧ್ಯಕ್ಷರು ಬೇರೆಲ್ಲಿಯೂ ಹೋಗಿಲ್ಲವಾ..? ಇವರು ಬೇರೆ ಯಾರ ಮನೆಗೂ ಹೋಗಿಲ್ವಾ, ಯಾರು ಬಂದಿಲ್ಲವಾ ಎಂದು ತಿರುಗೇಟು ನೀಡಿದ್ದಾರೆ.

ಪಕ್ಷದ ನಾಲ್ಕು ಗೋಡೆ ಮಧ್ಯದಲ್ಲಿ ಅವರ ನಿನ್ನೆ ಹೇಳಿಕೆ ಏನಿದೆ ರಕ್ಷಣೆಗಾಗಿ ಎಂಬುದು ಅದನ್ನು ನಾನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ನಮ್ಮ ಪಕ್ಷದ ವೇದಿಕೆಯಲ್ಲಿ ಇದನ್ನು ಚರ್ಚೆ ಮಾಡುತ್ತೇನೆ. ಈ ರೀತಿಯಲ್ಲಿ ಲಘುವಾಗಿ ಹೇಳಿಕೆ ಕೊಡುವಂತಾಗಬಾರದು. ಯಾಕೆ ನೀವೆಲ್ಲೂ ಹೋಗಿಲ್ವಾ. ನನಗೆ ಅದು ಗೊತ್ತಿದೆ. ನಿಮ್ಮ ಮನೆಗೆ ಯಾರು ಬಂದಿಲ್ವಾ..? ಇದು ನಿಮ್ಮ ಖಾಸಗಿ ವಿಚಾರದ ಅದು. ಇದು ಒಳ್ಳೆಯದ್ದಲ್ಲ. ಇದು ತುಂಬಾ ಸಣ್ಣ ವಿಚಾರ ಯಾರ ಮನೆಗೆ ಯಾರು ಊಟಕ್ಕೆ ಹೋಗ್ತಾರೆ, ಯಾರು ಬರ್ತಾರೆ..? ರಾಜಕೀಯಕ್ಕೂ ಅದಕ್ಕೂ ಸಂಬಂಧವೇನಿದೆ.

ರಕ್ಷಣೆಗಾಗಿ ಅಂತೆ. ಏನದು ನನಗೆ ರಕ್ಷಣೆ ಕೊಡುವುದಕ್ಕೆ ಏನಿದೆ..? ನಾನೇನು ಮುಖ್ಯಮಂತ್ರಿಯಾ..? ನಾನೇನು ಹೋಂ ಮಿನಿಸ್ಟರ್ ಹಾ ಅಥವಾ ಪಕ್ಷದ ಅಧ್ಯಕ್ಷನಾ..? ನಾನು ಪ್ರಚಾರದ ಸಮಿತಿ ಅಧ್ಯಕ್ಷ. ರಕ್ಷಣೆ ಕೊಡಬೇಕು ಎಂದರೆ ಯಾರು ಕೊಡಬೇಕು, ಡಿಕೆ ಶಿವಕುಮಾರ್ ಅವರು ಕೊಡಬೇಕು, ಸಿದ್ದರಾಮಯ್ಯನವರು ಕೊಡಬೇಕು. ಪಕ್ಷ ಕೊಡುತ್ತೆ ನಾನು ಕೊಡೋದಕ್ಕೆ ಆಗುತ್ತಾ..? ಅವರ ಹೇಳಿಕೆ ಸರಿಯಾದುದ್ದಲ್ಲ ಎಂದು ಡಿಕೆ ಶಿವಕುಮಾರ್ ಹೇಳಿಕೆಗೆ ಗರಂ ಆಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸುಳ್ಳು ಹೇಳಿದರೆ ತಾಯಿ ಭದ್ರೆ ಸಹಿಸುವುದಿಲ್ಲ : ಕಮಲ ಪಡೆಗೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಿರುಗೇಟು

ಸುದ್ದಿಒನ್, ಚಿತ್ರದುರ್ಗ, ಏ. 24 : ಭದ್ರಾ ಮೇಲ್ದಂಡೆ ಯೋಜನೆ ವಿಷಯದಲ್ಲಿ ನಿರಂತರ ಸುಳ್ಳು ಹೇಳಿಕೊಂಡು ಬರುತ್ತಿರುವ ಬಿಜೆಪಿಯವರಿಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿ, ಅದಕ್ಕಾಗಿ ನಡೆದ ಹೋರಾಟದ ಮಾಹಿತಿ ಕೊರತೆ ಇದೆ ಅಥವಾ

error: Content is protected !!