ಹಾಕಿದ್ದ ಖುರ್ಚಿಯೆಲ್ಲಾ ಖಾಲಿ.. ಖಾಲಿ : ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಎಂ ಬಿ‌ ಪಾಟೀಲ್ ಲೇವಡಿ

0 Min Read

ದಾವಣಗೆರೆ: ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಎಂ ಬಿ ಪಾಟೀಲ್ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಮೃತಮಹೋತ್ಸವಕ್ಕೆ 10-15 ಲಕ್ಷ ಜನ ಸೇರಿದ್ದರು. ಚಿಕ್ಕಬಳ್ಲಾಪುರದಲ್ಲಿ ಬಿಜೆಪಿಯವರ ಜನಸ್ಪಂದನನು ನೋಡಿದ್ರಿ. ಫುಲ್ ತುಂಬಿತ್ತು ಕಾರ್ಯಕ್ರಮ, ಶಾಮಿಯಾನ ತುಂಬಾ ಖುರ್ಚಿನೆ ಖುರ್ಚಿ. ಆದರೆ ಜನರಿಲ್ಲ ಎಂದು ಲೇವಡಿ ಮಾಡಿದ್ದಾರೆ.

 

ಪಂಚಮಸಾಲಿ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿ, ಪಂಚಮಸಾಲಿಗಳ ಹೋರಾಟ ನ್ಯಾಯಯುತವಾಗಿದೆ. ಅವರ ಹೋರಾಟಕ್ಕೆ ನಾನು ಸಂಪೂರ್ಣ ಬೆಂಬಲ ನೀಡಿದ್ದೇನೆ. ಇದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವು ನನಗೆ ಗೊತ್ತಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ‌ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *