Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂತ್ರಿ ಮಾಲ್ ಗೆ ತಪ್ಪದ ಸಂಕಷ್ಟ : ಮತ್ತೆ ಬೀಗ ಹಾಕಿದ BBMP..!

Facebook
Twitter
Telegram
WhatsApp

ಬೆಂಗಳೂರು: ಅದ್ಯಾಕೋ ಏನೋ ಮಂತ್ರಿ ಮಾಲ್ ಗೂ ಬಿಬಿಎಂಪಿ ಗೂ ಬಿಟ್ಟಿರದ ಬಾಂಧವ್ಯ ಬೆಳೆದಮನತೆ ಕಾಣುತ್ತಿದೆ. 15/20 ದಿನಗಳಿಗೊಮ್ಮೆ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಗೆ ಹೋಗ್ತಾನೆ ಇದ್ದಾರೆ. ಹಾಗಂತ ಅವರೋಗ್ತಾ ಇರೋದು ಶಾಪಿಂಗ್ ಮಾಡೋದಕ್ಕಲ್ಲ, ಬದಲಿಗೆ ಮಾಲ್ ಗೆ ಬೀಗ ಹಾಕೋದಕ್ಕೆ.

ಹೌದು, ಸಿಲಿಕಾನ್ ಸಿಟಿಯಲ್ಲಿ ಮಂತ್ರಿ ಮಾಲ್ ಗೆ ದೊಡ್ಡ ಹೆಸರಿದೆ. ವೀಕೆಂಡ್ ಬಂತು ಅಂದ್ರೆ ಶಾಪಿಂಗ್, ಟೈಪಾಸ್ ಅಂತ ಜನ ಚೂಸ್ ಮಾಡೋದು ಇದೇ ಮಂತ್ರಿ‌ಮಾಲ್ ಅನ್ನ. ವೀಕೆಂಡ್ ಗಳಲ್ಲಿ ತುಂಬಿ ತುಳುಕುವ ಮಾಲ್ ಮಾಮೂಲಿ ದಿನಗಳಲ್ಲೂ ಖಾಲಿ ಅಂತು ಇರಲ್ಲ. ಇಷ್ಟು ದೊಡ್ಡ ವ್ಯಾಪಾರ ವಹಿವಾಟು ನಡೆಸೋ ಮಾಲ್ ಬಿಬಿಎಂಪಿ ಗೆ ತೆರಿಗೆ ಕಟ್ಟದೆ, ಈ ರೀತಿ ಆಗಾಗ ಬೀಗ ಹಾಕಿಸಿಕೊಳ್ಳುತ್ತಿದೆ.

ಮಂತ್ರಿ ಮಾಲ್ ಬಿಬಿಎಂಪಿ ಗೆ ಒಟ್ಟು 36 ಕೋಟಿ ಹಣವನ್ನ ತೆರಿಗೆ ಕಟ್ಟಬೇಕಿತ್ತು. ಅದರಲ್ಲಿ ಅಕ್ಟೋಬರ್ ನಲ್ಲಿ ಒಮ್ಮೆ ಬೀಗ ಹಾಕಲು ಹೋದಾಗ 5‌ಕೋಟಿ ತೆರಿಗೆ ಕಟ್ಟಿತ್ತು. ಆ ಬಳಿಕ ಸಮಯಾವಾಕಾಶ ಕೇಳಿದ್ದ ಮಾಲ್ ಸಮಯ ಮುಗಿದರು ಕಟ್ಟಿರಲಿಲ್ಲ. ನವೆಂಬರ್ 15 ರಂದು ಮತ್ತೆ ಬೀಗ ಜಡಿದಾಗ ಆಗಲು ಸ್ವಲ್ಪ ತೆರಿಗೆ ಕಟ್ಟಿ ಮತ್ತೆ ಸಮಯಾವಾಕಾಶ ಕೇಳಿತ್ತು. ಆದರೀಗ ಸಮಯ ಮುಗಿದರು ಕಟ್ಟಿಲ್ಲ. ನೋಟೀಸ್ ನೀಡಿದರು ಕಟ್ಟಿಲ್ಲ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತೆ ಬೀಗ ಜಡಿದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ | ಬಿ. ಫಾರಂಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭ

ಸುದ್ದಿಒನ್, ಚಿತ್ರದುರ್ಗ, ಮಾ.29: ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಗೋ ಬ್ಯಾಕ್ ಗೋವಿಂದ ಕಾರಜೋಳ | ಬಿಜೆಪಿ ಅಭ್ಯರ್ಥಿಗೆ ಚಿತ್ರದುರ್ಗದಲ್ಲಿ ತಟ್ಟಿದ ಬಂಡಾಯದ ಬಿಸಿ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29  : ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬಂಡಾಯದ ಬಿಸಿ ತಟ್ಟಿದೆ. ಟಿಜೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಆದರೆ ಇದೆ ವೇಳೆ ಟಿಕೆಟ್

ಚಿತ್ರದುರ್ಗ | ಯಾದವ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ರವರು ಯಾದವ ಸಂಸ್ಥಾನ ಮಹಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಬಸವ

error: Content is protected !!