Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನುಷ್ಯ ಸಮಾಜ ನಿರ್ಮಾಣ ಮಾಡಬೇಕು, ಜಾತಿ ವ್ಯವಸ್ಥೆಗೆ ದೂರ : ಸಿದ್ದರಾಮಯ್ಯ

Facebook
Twitter
Telegram
WhatsApp

ಚಿತ್ರದುರ್ಗ: ಪಟ್ಟಭದ್ರ ಹಿತಾಸಕ್ತಿಗಳಿ ಹಿಂದೂತ್ವದ ಹೆಸರಿನಲ್ಲಿ ಜಾತಿ ವ್ಯವಸ್ಥೆ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ.ನಾನು ಜಾತಿ ವ್ಯವಸ್ಥೆಗೆ ವಿರುದ್ದ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಮಡಿವಾಳ ಮಾಸಿದೇವ ಮಠದಲ್ಲಿ ಹಮ್ಮಿಕೊಂಡಿದ್ದ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ಮಾಚಿದೇವಶ್ರೀ ಪ್ರಶಸ್ತ್ರಿಯನ್ನು ಸ್ವೀಕಾರ ಮಾಡಿ ಮಾತನಾಡಿದ ಅವರು, ಜಾತಿ ರಹಿತ, ವರ್ಗ ರಹಿತ ಸಮಾಜ, ಮನುಷ್ಯ ಸಮಾಜ ನಿರ್ಮಾಣ ಆಗಬೇಕು. ಧರ್ಮದ ಭಾಷೆ ಪ್ರೀತಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೆ ಪ್ರೀತಿ. ಇದನ್ನು ಪ್ರತಿಯೊಬ್ಬರು ತಿಳಿದು ಬದುಕಬೇಕು. ಜಾತಿಗಳನ್ನು ಗುರುತಿಸಿ ಜಾತಿ ವ್ಯವಸ್ಥೆಯನ್ಮು ವಿರೋಧಿಸುವ ಮೂಲಕ ಜಾತಿಗಳನ್ನು ಕಿತ್ತೊಗೆಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಾತಿ ವ್ಯವಸ್ಥೆಯ ಕಾರಣಕ್ಕೆ ನಮ್ಮಲ್ಲಿ ಅಸಮಾನತೆ ಆರ್ಥಿಕ ಹಾಗೂ ರಾಜಕೀಯವಾಗಿ ನಿರ್ಮಾಣ ಆಗಿದೆ. ದೇವರು, ಸ್ವಾಮೀಜಿಗಳು ಜಾತಿ ವ್ಯವಸ್ಥೆ ಹುಟ್ಟುಹಾಕಿಲ್ಲ. ನಾನು ಹಿಂದೂ. ನಮಗೆ ಖಾಯಿಲೆ ಬಂದರೆ ನಮ್ಮ ಜಾತಿಯ ವೈದ್ಯರೆ ಬೇಕು ಎನ್ನುತ್ತೇವೆಯೋ. ಬದುಕಿಸಲು ಯಾರಾದರೆನು ಎಂದು ನಂತರ ಸ್ವಾರ್ಥಕ್ಕಾ ಜಾತಿ ವ್ಯವಸ್ಥೆ ಎಂದು ಹೇಳುವುದು ಎಷ್ಟು ಸರಿ ಎಂದ ಅವರು, ಮಡಿವಾಳ ಸಮಾಜ ಸಣ್ಣ ಸಮಾಜ. ಇದನ್ನು ಸಾಮಾಜಿಕ ಆರ್ಥಿಕವಾಗಿ ಮೇಲೆ ತರುವ ನಿಟ್ಟಿನಲ್ಲಿ ಸ್ವಾಮೀಜಿಗಳು ಶ್ರಮಿಸಲಿ ಎಂದು ಸಿದ್ದರಾಮಯ್ಯ ಹಾರೈಸಿ ದೇಶದ ಸಂಪತ್ತು ಎಲ್ಲಾ ಜನರ ಸಂಪತ್ತು, ಯಾರು ಒಬ್ಬರು ತೆರಿಗೆ ಕಟ್ಟಲ್ಲ.

 

ಸ್ವಾತಂತ್ರ್ಯ ಬಂದಾಗ ೧೬% ಮಾತ್ರ ಶಿಕ್ಷಣ ಪಡೆದಿದ್ದರು.ಇಂದು ೭೮% ಶಿಕ್ಷಣ ಪಡೆದಿದ್ದಾರೆ. ನಿಮ್ಮಲ್ಲಿ ಬಹಳ ಕಡಿಮೆ ಇದ್ದಾರೆ.ಸಮ ಸಮಾಜ ಆಗಬೇಕು ಎಂದು ಗಾಂಧೀಜಿ, ಅಂಬೇಡ್ಕರ್, ಬುದ್ದ ಸೇರಿದಂತೆ ಮಹನೀಯರು ಹೇಳಿದ್ದಾರೆ. ಶಿಕ್ಷಣ ಸಂಘಟನೆ ಹೋರಾಟದ ಮೂಲಕ ನಮ್ಮ ಸಮಾಜದ ಅಭಿವೃದ್ಧಿ ಸಾಧ್ಯ. ೮೫೦ ವರ್ಷಗಳ ಹಿಂದೆ ಬಸವಣ್ಣ ಹೇಳಿದ ಇವ ನಮವ್ವ ಇವ ನಮ್ಮವ ಎಂದು ಹೇಳಿದರು ಆದರೆ ಇದುವೆರಿಗೂ ಅನುಷ್ಠಾನ ಮಾಡಿಲ್ಲ. ಅನುಷ್ಟಾನ ಆಗದೆ ಇರುವ ರೀತಿ ಮಾಡಲು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಇದರ ಬಗ್ಗೆ ನಾವುಗಳು ಎಚ್ಚೆತ್ತುಕೊಳ್ಳಬೇಕು.ಜಾತಿ ವ್ಯವಸ್ಥೆಯಿಂದ ಗುಲಾಮಗಿರಿ ಮನೆ ಮಾಡಿದೆ. ಇದನ್ನು ಕಿತ್ತೊಗೆಯಬೇಕು. ಸ್ವಾಭಿಮಾನದಿಂದ ಬದುಕುವುದನ್ನು ಪ್ರತಿಯೊಬ್ಬರು ಕಲೆತಾಗ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!