Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲಂಚ ಕೇಳೋ ಅಧಿಕಾರಿಗಳಿಗೆ ಈ ರೈತನ ರೀತಿ ಬುದ್ಧಿ ಕಲಿಸಬೇಕು ನೋಡಿ..!

Facebook
Twitter
Telegram
WhatsApp

ಹಾವೇರಿ: ಲಂಚ..ಲಂಚ..ಲಂಚ.. ಎಲ್ಲಿ ನೋಡಿದ್ರು, ಯಾವ ಕೆಲಸ ಆಗಬೇಕು ಎಂದರೂ ಇದಿಲ್ಲದೆ ಹೋದರೆ ಏನು ನಡೆಯಲ್ಲ. ಲಂಚ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ ಜನ. ಗ್ರಾಮ ಪಂಚಾಯ್ತಿಯಿಂದ ಹಿಡಿದು ದೊಡ್ಡ ದೊಡ್ಡ ಕಚೇರಿಗಳಲ್ಲೂ ನೇರವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಆದ್ರೆ ಎಲ್ಲರೂ ಈ ರೈತನಂತೆ ಬುದ್ಧಿವಂತರಾಗಿ, ಧೈರ್ಯವಾಗಿ ನಿಂತರೆ ಲಂಚ ಮುಕ್ತ ಮಾಡುವುದು ತೀರಾ ಕಷ್ಟ ಸಾಧ್ಯವಲ್ಲ.

ಈ ಘಟನೆ ನಡೆದಿರುವುದು ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ. ಯಲ್ಲಪ್ಪ ರಾಣೋಜಿ ಎಂಬ ರೈತ ತನ್ನ ಮನೆಯ ಖಾತೆ ಬದಲಾಯಿಸುವುದಕ್ಕೆ ಜಿಲ್ಲೆಯ ಸವಣೂರಿನ ಪುರಸಭೆಗೆ ಬಂದಿದ್ದಾರೆ. ಅಲ್ಲಿ ಮೊದಲಿದ್ದ ಅಧಿಕಾರಿ ಹಣ ಕೇಳಿದ್ದಾರೆ. ಪಾಪ ಈ ರೈತ ಹಾಗೋ ಹೀಗೋ ಒದಗಿಸಿ ಹಣ ಕೊಟ್ಟಿದ್ದಾರೆ. ಹಣ ತಿಂದವ ಕೆಲಸವನ್ನು ಮಾಡಿಕೊಡದೆ, ಅಲ್ಲಿಂದ ವರ್ಗಾವಣೆಯಾಗಿದ್ದಾರೆ.

ಈಗ ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ಬಂದಿದ್ದು, ಮತ್ತೆ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಯಲ್ಲಪ್ಪ, ತನ್ನಲ್ಲಿದ್ದ ಎತ್ತುಗಳನ್ನು ಕರೆದುಕೊಂಡು ಬಂದು, ಸಾರ್ ನನ್ನ ಬಳಿ ನೀವೂ ಕೇಳಿದಷ್ಟು ಹಣವಿಲ್ಲ. ನಾನು ಹಣ ನೀಡುವ ತನಕ ಈ ಎತ್ತುಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ರೈತನ ನಡೆಗೆ ಅಧಿಕಾರಿಗಳು ದಂಗಾಗಿದ್ದಾರೆ.

ಇನ್ನು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 40 ಪರ್ಸೆಂಟ್ ಸರ್ಕಾರ ರೈತರನ್ನು ಬಿಟ್ಟಿಲ್ಲ. ಪೇಸಿಎಂ ಬಸವರಾಜ್ ಬೊಮ್ಮಾಯಿ ಯಾರು ಲಂಚ ಕೊಡುತ್ತಾರೋ ಅವರ ಪರ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜೆಇಇ” ಮೈನ್ಸ್‌ ಫಲಿತಾಂಶ | ಆಲ್‌ ಇಂಡಿಯಾ ರ್ಯಾಂಕ್‌ ಪಡೆದು ದಾಖಲೆ ನಿರ್ಮಿಸಿದ ಚಿತ್ರದುರ್ಗದ ʼಎಸ್‌ ಆರ್‌ ಎಸ್‌ʼ ವಿದ್ಯಾರ್ಥಿಗಳು

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.25 :  ನಗರದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದೇ ಏಪ್ರಿಲ್‌ ತಿಂಗಳಲ್ಲಿ ನಡೆದ “ಜೆಇಇ ಮೈನ್ಸ್‌”ನ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಎರಡನೇ ಸ್ಲಾಟ್‌ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿ

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

  ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ

JEE MAIN 2024 : ಉತ್ತಮ ಸಾಧನೆ ಮಾಡಿದ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು

  ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 25 : ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯ ಫಲಿತಾಂಶದೊಂದಿಗೆ JEE MAINS ನಲ್ಲೂ  ಮೂರು  ADVANCE ಗೆ ಅರ್ಹತೆ ಪಡೆದುಕೊಂಡಿದ್ದಾರೆ ವೇದ ಪಿಯು ಕಾಲೇಜಿನ ವಿದ್ಯಾರ್ಥಿಗಳು. ತಾಲೂಕು ಸಾಣಿಕೆರೆಯ

error: Content is protected !!