in

ಲಂಚ ಕೇಳೋ ಅಧಿಕಾರಿಗಳಿಗೆ ಈ ರೈತನ ರೀತಿ ಬುದ್ಧಿ ಕಲಿಸಬೇಕು ನೋಡಿ..!

suddione whatsapp group join

ಹಾವೇರಿ: ಲಂಚ..ಲಂಚ..ಲಂಚ.. ಎಲ್ಲಿ ನೋಡಿದ್ರು, ಯಾವ ಕೆಲಸ ಆಗಬೇಕು ಎಂದರೂ ಇದಿಲ್ಲದೆ ಹೋದರೆ ಏನು ನಡೆಯಲ್ಲ. ಲಂಚ ಕೊಟ್ಟು ಕೊಟ್ಟು ಸುಸ್ತಾಗಿ ಹೋಗಿದ್ದಾರೆ ಜನ. ಗ್ರಾಮ ಪಂಚಾಯ್ತಿಯಿಂದ ಹಿಡಿದು ದೊಡ್ಡ ದೊಡ್ಡ ಕಚೇರಿಗಳಲ್ಲೂ ನೇರವಾಗಿಯೇ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಆದ್ರೆ ಎಲ್ಲರೂ ಈ ರೈತನಂತೆ ಬುದ್ಧಿವಂತರಾಗಿ, ಧೈರ್ಯವಾಗಿ ನಿಂತರೆ ಲಂಚ ಮುಕ್ತ ಮಾಡುವುದು ತೀರಾ ಕಷ್ಟ ಸಾಧ್ಯವಲ್ಲ.

ಈ ಘಟನೆ ನಡೆದಿರುವುದು ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ. ಯಲ್ಲಪ್ಪ ರಾಣೋಜಿ ಎಂಬ ರೈತ ತನ್ನ ಮನೆಯ ಖಾತೆ ಬದಲಾಯಿಸುವುದಕ್ಕೆ ಜಿಲ್ಲೆಯ ಸವಣೂರಿನ ಪುರಸಭೆಗೆ ಬಂದಿದ್ದಾರೆ. ಅಲ್ಲಿ ಮೊದಲಿದ್ದ ಅಧಿಕಾರಿ ಹಣ ಕೇಳಿದ್ದಾರೆ. ಪಾಪ ಈ ರೈತ ಹಾಗೋ ಹೀಗೋ ಒದಗಿಸಿ ಹಣ ಕೊಟ್ಟಿದ್ದಾರೆ. ಹಣ ತಿಂದವ ಕೆಲಸವನ್ನು ಮಾಡಿಕೊಡದೆ, ಅಲ್ಲಿಂದ ವರ್ಗಾವಣೆಯಾಗಿದ್ದಾರೆ.

ಈಗ ಆ ಜಾಗಕ್ಕೆ ಮತ್ತೊಬ್ಬ ಅಧಿಕಾರಿ ಬಂದಿದ್ದು, ಮತ್ತೆ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಕಂಗೆಟ್ಟ ಯಲ್ಲಪ್ಪ, ತನ್ನಲ್ಲಿದ್ದ ಎತ್ತುಗಳನ್ನು ಕರೆದುಕೊಂಡು ಬಂದು, ಸಾರ್ ನನ್ನ ಬಳಿ ನೀವೂ ಕೇಳಿದಷ್ಟು ಹಣವಿಲ್ಲ. ನಾನು ಹಣ ನೀಡುವ ತನಕ ಈ ಎತ್ತುಗಳನ್ನು ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ. ರೈತನ ನಡೆಗೆ ಅಧಿಕಾರಿಗಳು ದಂಗಾಗಿದ್ದಾರೆ.

ಇನ್ನು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 40 ಪರ್ಸೆಂಟ್ ಸರ್ಕಾರ ರೈತರನ್ನು ಬಿಟ್ಟಿಲ್ಲ. ಪೇಸಿಎಂ ಬಸವರಾಜ್ ಬೊಮ್ಮಾಯಿ ಯಾರು ಲಂಚ ಕೊಡುತ್ತಾರೋ ಅವರ ಪರ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಉಡುಪಿ ದೇಗುಲದ ವಿಚಾರಕ್ಕೆ ಕೋಪಗೊಂಡ ರಕ್ಷಿತ್ ಶೆಟ್ಟಿ : ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ಕ್ಲಾಸ್..!

ಚಿತ್ರದುರ್ಗ : ಎಸ್.ಜೆ.ಎಂ. ದಂತ ಮಹಾವಿದ್ಯಾಲಯಕ್ಕೆ 4 ರ‌್ಯಾಂಕ್