ಸುದ್ದಿಒನ್,ದಾವಣಗೆರೆ, (ಸೆ.02) : ಬಸವರಾಜ ಬೊಮ್ಮಾಯಿ ಅವರ ಸರ್ಕಾರವೂ ಹೆಚ್ಚು ದಿನ ಇರಲ್ಲ ಮತ್ತೆ ಬದಲಾಗುತ್ತೆ ಅಂತಾನೇ ಹೇಳಲಾಗ್ತಾ ಇತ್ತು. ಆದ್ರೆ ಇದೀಗ ಆ ಅನುಮಾನಕ್ಕೆಲ್ಲಾ ಅಮಿತ್ ಶಾ ತೆರೆ ಎಳೆದಿದ್ದಾರೆ. ಮುಂಬರುವ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಅಂತೇಳುವ ಮೂಲಕ ಇರುವ ಅನುಮಾನಗಳಿಗೆಲ್ಲಾ ತೆರೆ ಎಳೆದಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅಮಿತ್ ಶಾ, ನಂಗೆ ಸಂಪೂರ್ಣ ನಂಬಿಕೆ ಇದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದು ಸಿಎಂ ಬಸವರಾಜ್ ಬೊಮ್ಮಾಯಿ ಅವ್ರೆ ನಿರ್ವಹಿಸ್ತಾರೆ. ಅಭಿವೃದ್ಧಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಬೊಮ್ಮಾಯಿ ಸರ್ಕಾರ ನಾಲ್ಕು ಹೆಜ್ಜೆ ಮುಂದಿಡಲಿದೆ.
ಯಡಿಯೂರಪ್ಪ ಅವರು ನಿರ್ಧರಿಸಿದ್ದರು. ಯಾರಾದ್ರೂ ಹೊಸ ವ್ಯಕ್ತಿ ಸಿಎಂ ಆಗ್ಲಿ ಅಂತ. ಹಾಗಾಗಿ ಬಸವರಾಜ್ ಬೊನ್ನಾಯಿ ಅವ್ರೆ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಕೊರೊನಾ ಭೀತಿ ಇದೆ. ಅದಕ್ಕೆ ಸರ್ಕಾರ ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಜೆಪಿ ಕ್ಷ ಬಸವರಾಜ್ ಬೊಮ್ಮಾಯಿ ಅವ್ರನ್ನ ಸಿಎಂ ಮಾಡಿ ಉತ್ತಮ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.