Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಖತ್ ಮಾಸ್..ಟ್ರೈಲರ್ನಲ್ಲೇ ಕಿಕ್ಕೇರಿಸಿದ ‘ಲಂಕೆ’

Facebook
Twitter
Telegram
WhatsApp
ಲೂಸ್ ಮಾದ ಯೋಗಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಂಕೆ ಫಸ್ಟ್ಲುಕ್ ಟೀಸರ್ ಮೂಲಕವೇ ಸಿನಿಪ್ರಿಯರ ಮನಸ್ಸು ಕದ್ದಿದ್ದು, ಇದೀಗ ಚಿತ್ರದ ಮೇಲಿನ ನಿರೀಕ್ಷೆಯನ್ನು ಟ್ರೈಲರ್ ದುಪ್ಪಟ್ಟು ಮಾಡಿದೆ.

ಲಂಕೆ ಚಿತ್ರ ಸೆಪ್ಟಂಬರ್ 10 ಅಂದರೆ ಗಣೇಶ ಚತುರ್ಥಿಯ ದಿನ  ತೆರೆ ಕಾಣುವುದು ಪಕ್ಕಾ ಆಗಿದ್ದು, ತೆರೆ ಮೇಲೆ ಅಪ್ಪಳಿಸೋಕೆ ಲಂಕೆ ಸಿದ್ಧವಾಗಿದೆ ಅಂತಾ ಚಿತ್ರತಂಡವೇ ತಿಳಿಸಿದೆ. ಸಿನಿಮಾ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಚಿತ್ರತಂಡ ಮೂಲಕ ಲಂಕೆಯ ಚಿಕ್ಕ ಝಲಕ್ ನೀಡಿದ್ದು, ಟ್ರೈಲರ್ ನೋಡಿದ ಪ್ರೇಕ್ಷಕ ಪ್ರಭು ಲಂಕೆಗೆ ಜೈ ಎಂದಿದ್ದಾರೆ.
ಆನಂದ್ ಆಡಿಯೋ ಯೂಟ್ಯಬ್ನಲ್ಲಿ ಲಂಕೆ ಚಿತ್ರದ ಮಾಸ್ ಟ್ರೈಲರ್ ಬಿಡುಗಡೆಯಾಗಿದ್ದು, ಕಿಕ್ಕೇರಿಸೋ ಲಂಕೆಯ ಝಲಕ್ ನೋಡಿ ಯೋಗಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಲಂಕೆ ಚಿತ್ರ ಟ್ರೈಲರ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಲಂಕೆ ಕಮಾಲ್ ಮಾಡೋದು ಪಕ್ಕಾ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ.
ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿರುವ ಲಂಕೆ ಚಿತ್ರಕ್ಕೆ ನಿರ್ದೇಶಕ ರಾಮ್ ಪ್ರಸಾದ್  ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ರವಿವರ್ಮ, ಪಳನಿರಾಜ್, ಅಶೋಕ್ ಚಿತ್ರಕ್ಕೆ ಅಧ್ಬುತ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದು, ಕಾರ್ತಿಕ್ ಶರ್ಮಾ ಸೂಪರ್ ಸಾಂಗ್ಗಳನ್ನು ನೀಡಿದ್ದಾರೆ.
ಚಿತ್ರದಲ್ಲಿ ಲೂಸ್ ಮಾದ ಯೋಗಿ ಅವರಿಗೆ ನಾಯಕಿಯರಾಗಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ ಕಾಣಿಸಿಕೊಳ್ಳಲಿದ್ದು, ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ಶೋಬ್ ರಾಜ್, ಶರತ್ ಲೋಹಿತಾಶ್ವ, ಗಾಯಿತ್ರಿ ಜೈರಾಮ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ಅನೇಕ ನಟ ದಿಗ್ಗಜರು ಲಂಕೆಯಲ್ಲಿ ಒಗ್ಗೂಡಿದ್ದಾರೆ.
ಲಂಕೆ ಔಟ್ ಅಂಡ್ ಔಟ್ ಕಮರ್ಶಿಯಲ್ ಪ್ಯಾಕೇಜ್ ಚಿತ್ರವಾಗಿದ್ರೂ ಸಹ ಬರೀ ಆಕ್ಷನ್ ಸೀನ್, ಪವರ್ ಫುಲ್ ಡೈಲಾಗ್ ಮಾತ್ರವಲ್ಲದೇ ಲವ್, ಸೆಂಟಿಮೆಂಟ್ ಎಲ್ಲವೂ ಇದೆ ಎನ್ನುವುದನ್ನು ಈಗಾಗಲೇ ಟ್ರೈಲರ್ ಸ್ಪಷ್ಟಪಡಿಸಿದ್ದಾರೆ.
ಕೇವಲ ಟ್ರೈಲರ್ ಮೂಲಕವೇ ಪ್ರೇಕ್ಷಕರಿಗೆ ಮನೋರಂಜನೆ ನೀಡಿರುವ ಲಂಕೆ ಇದೇ ಸೆಪ್ಟೆಂಬರ್ 10ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!