Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಕಲ ಭಕ್ತಿ ಗೌರವಗಳೊಂದಿಗೆ ನೆರವೇರಿದ ಕ್ಯಾಸಾಪುರ ಆಂಜನೇಯಸ್ವಾಮಿ ಕಾರ್ತೀಕೋತ್ಸವ

Facebook
Twitter
Telegram
WhatsApp

 

ಚಿತ್ರದುರ್ಗ, (ನ.19) ; ಐತಿಹಾಸಿಕ ಹಿನ್ನಲೆ ಹೊಂದಿರುವ ನಗರದ ಸಮೀಪದಲ್ಲಿರುವ ಕ್ಯಾಸಾಪುರ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (ವೀರ ಪ್ರತಾಪ ಮಾರುತಿ) ಶನಿವಾರ ಸಕಲ ಭಕ್ತಿ ಗೌರವಗಳೊಂದಿಗೆ ವಿಶೇಷವಾಗಿ ಕಡೆ ಕಾರ್ತೀಕೋತ್ಸವ ಧಾರ್ಮಿಕ ಕಾರ್ಯಕ್ರಮ ನೆರವೇರಿತು.

ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರೆವೇರಿದ್ದು, ಪುಷ್ಪಾಲಂಕಾರ, ಮಹಾಮಂಗಳಾರತಿ ಜೊತೆಗೆ ಅನ್ನದಾಸೋಹ ಕಾರ್ಯಕ್ರಮಗಳು ಜರುಗಿದವು.  ಭಕ್ತರ ಇಷ್ಟಾರ್ಥಗಳು ಹಾಗೂ ಮನಸಂಕಲ್ಪಗಳು ನೆರವೇರಲು ಭಕ್ತರಿಂದಲೇ ಮಂಡಕ್ಕಿ ರಾಶಿ ಫಲಹಾರ ವಿಶೇಷ ಸೇವೆ ಶ್ರೀಆಂಜನೇಯನಿಗೆ ಸಮರ್ಪಿಸಲಾಯಿತು.

ಜೊತೆಗೆ ಕಾರ್ತೀಕೋತ್ಸವ ಅಂಗವಾಗಿ ಸಹಸ್ರ ದೀಪಾಲಂಕಾರ ಪೂಜಾ ಕೈಂಕಾರ್ಯಗಳು, ಪ್ರಸಾದ ವಿನಿಯೋಗ ಭಕ್ತರಿಂದ ನೆರವೇರಿದವು.

ವಾರ್ಷಿಕವಾಗಿ ಶ್ರೀದೇವಸ್ಥಾನದಲ್ಲಿ ರಾಮೋತ್ಸವ, ಶ್ರಾವಣ ವಿಶೇಷ ಪೂಜೆ ಜೊತೆಗೆ ಕಡೇ ಕಾರ್ತೀಕೋತ್ಸವ ಕಾರ್ಯಕ್ರಮಗಳನ್ನು   ಭಕ್ತಿ ಗೌರವಗಳೊಂದಿಗೆ ನೆರವೇರಿಸಲಾಗುತ್ತಾ ಬರುತ್ತಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ಆರ್.ನಾಗಭೂಷಣ ಶಾಸ್ತ್ರಿ ವಿವರಿಸಿದರು.  ಕಾರ್ತೀಕೋತ್ಸವ ಅಂಗವಾಗಿ ಕ್ಯಾಸಾಪುರ ಸೇರಿದಂತೆ ಸುತ್ತಮುತ್ತಲಿನ  ಗ್ರಾಮಸ್ಥರು  ತಮ್ಮ ಮನೆಗಳಲ್ಲಿ ಹಾಗೂ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಕಾರ್ತೀಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಅನ್ಯ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀ ಮಾರುತಿ ದರ್ಶನ ಪಡೆದರು.

ಕೋಟಿ ರೂ. ವೆಚ್ಚದಲ್ಲಿ ಘಂಟಾ ಗೋಪುರ;
ಮನುಷ್ಯನಿಗೆ ಮಾನಸಿಕ ನೆಮ್ಮದಿ, ಸ್ಥೈರ್ಯ, ಧೈರ್ಯಗಳನ್ನು ದೇವಾಲಯಗಳ ಘಂಟೆಯ ನಾದ ನೀಡಬಲ್ಲವು.  ಅದೇ ಮಾದರಿಯಲ್ಲಿ ಭಕ್ತರ ಸಂಕಲ್ಪಗಳು ನೆರವೇರಲು, ಮಾನಸಿಕ ದೈರ್ಯ, ಸೈರ್ಯ ತುಂಬಲು ಸಹಕಾರಿಯಾಗುವಂತಹ ಘಂಟಾ ಗೋಪುರವನ್ನು ಶ್ರೀ ಆಂಜನೇಯ ದೇವಸ್ಥಾನದಲ್ಲಿ ನಿರ್ಮಿಸಲಾಗುತ್ತಿದೆ.  ಒಂದು ಕೋಟಿ ರೂ. ವೆಚ್ಚದಲ್ಲಿ ಈ ದಾರ್ಮಿಕ ಸೇವೆ ನಡೆಯುತ್ತಿದ್ದು, ಈಗಾಗಲೇ 80 ಲಕ್ಷ ರೂ.ಗಳ ಕಾರ್ಯ ಮುಗಿದಿದ್ದು, ಇನ್ನೂ 20 ಲಕ್ಷ ರೂ.ಗಳ ಕೆಲಸ ನಡೆಯುತ್ತಿದೆ.  ಪ್ರಸ್ತುತ ಬರಲಿರುವ ಶ್ರಾವಣ ಮಾಸದದಲ್ಲಿ ಕಳಸಸ್ಥಾಪನೆ, ಗೋಪುರ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಶ್ರೀ ಆರ್.ನಾಗಭೂಷಣ ಶಾಸ್ತ್ರಿ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

error: Content is protected !!