ಸಣ್ಣ ವಯಸ್ಸಿಗೇನೆ ಮಂಡಿನೋವು ಬರ್ತಾ ಇದ್ಯಾ : ಆಹಾರ ಕ್ರಮ ಹೀಗಿರಲಿ

ಮಂಡಿನೋವು ಅನ್ನೋದು ಈ ಮೊದಲೆಲ್ಲಾ ನಮ್ಮ ಅಜ್ಜ ಮುತ್ತಾತಂದಿರಿಗೆ ಬರ್ತಾ ಇತ್ತು. ವಯಸ್ಸಾದ ಮೇಲೆ,‌ ಮೂಳೆ ಸವೆಯುವುದಕ್ಕೆ ಶುರುವಾದ ಮೇಲೆ. ಆದರೆ ಈಗಿನ ಪೀಳಿಗೆಯವರಲ್ಲಿ ಸಮಸ್ಯೆ ಬಹಳ ಬೇಗನೇ ಬರ್ತಾ ಇದೆ. ಇಪ್ಪತ್ತು/ಇಪ್ಪತ್ತೈದನೇ ವಯಸ್ಸಿನವರಲ್ಲಿಯೇ ಈ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಅದೆಷ್ಟೋ ಜನ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ನೆಲದ ಮೇಲೆ ಕುಳಿತುಕೊಳ್ಳುವುದಕ್ಕೂ ಕಷ್ಟ ಪಡ್ತಾ ಇದಾರೆ, ಮೆಟ್ಟಿಲುಗಳನ್ನ ಹತ್ತುವುದಕ್ಕೂ ಸಂಕಟ ಪಡುತ್ತಿದ್ದಾರೆ. ಈ ರೀತಿ ಚಿಕ್ಕ ವಯಸ್ಸಿಗೇನೆ ಮೂಳೆಯ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿಯೇ ಸೇವಿಸಬೇಕಾದ್ದನ್ನ ಸೇವಿಸುತ್ತಿಲ್ಲ ಎಂದೇ ಅರ್ಥ. ಹಾಗಾದ್ರೆ ಈ ಮೂಳೆ ಸಮಸ್ಯೆಗೆ ಪರಿಹಾರ ಏನು ಮಾಡಬೇಕು ಎಂಬುದನ್ನ ಇಲ್ಲಿ ತಿಳಿಸ್ತೀವಿ ನೋಡಿ.

* ಸಾಧ್ಯವಾದಷ್ಟು ನಮ್ಮ ಆಹಾರ ಕ್ರಮದಲ್ಲಿ ಹಸಿರು ತರಕಾರಿ, ಹಣ್ಣುಗಳನ್ನ ಅಳವಡಿಸಿಕೊಳ್ಳಬೇಕು. ಪ್ರತಿದಿನದ ಆಹಾರದಲ್ಲಿ ಅದನ್ನ ಸೇವಿಸುತ್ತಾ ಬರಬೇಕು. ಆಗ ಈ ಮೂಳೆ ನೋವಿನ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ.

* ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳಲ್ಲಿ ಜಾಯಿಂಟ್ ಗೆ ಸಂಬಂಧಿಸಿದ ಅಂಶಗಳು ಅಡಗಿವೆ. ಹೀಗಾಗಿ ಸಾಧ್ಯವಾದಷ್ಟು ಈ ಹಣ್ಣುಗಳನ್ನು ತಿನ್ನುತ್ತಾ ಇರಿ.

* ಮಂಡಿನೋವಿನಿಂದ ಏನಾದ್ರೂ ಬಳಲುತ್ತಾ ಇದ್ದರೆ ಫೈನಾಪಲ್ ತಿನ್ನೋದನ್ನ ಅಭ್ಯಾಸ ಮಾಡಿಕೊಳ್ಳಿ. ಒಂದು ವಾರ ರೆಗ್ಯೂಲರ್ ಆಗಿ ತಿಂದು ನೋಡಿ. ಇದರಲ್ಲಿರುವ ಅಂಶವೂ ಮಂಡಿನೋವನ್ನ ಕಡಿಮೆ ಮಾಡುತ್ತದೆ.

* ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಹಾಗೂ ಕೆ ಅಂಶಗಳಿವೆ. ಇದು ನಿಮ್ಮ ತ್ವಜೆಯ‌ನ್ನು ಚೆಂದ ಮಾಡುವುದಲ್ಲದೆ, ಮೂಳೆಗಳ ಬಲವರ್ಧನೆಗೂ ಸಹಾಯ ಮಾಡುತ್ತದೆ.

* ಹಾಗೇ ಮಂಡಿನೋವು ಬರುವುದಕ್ಕೆ ಪ್ರಮುಖ ಕಾರಣವಾದ ಕಾರ್ಟಲೇಜ್ ಸಮಸ್ಯೆಯನ್ನು ಕಡಿಮೆ ಮಾಡುವ ಶಕ್ತಿ ಹೊಂದಿರುವುದು ಬ್ರೋಕಲಿ. ಪ್ರತಿದಿನ ಬ್ರೋಕಲಿ ಜೊತೆಗೆ ಮಿಶ್ರ ತರಕಾರಿಗಳನ್ನ ಹಾಕಿ, ಸ್ಟೀಮ್ ಮಾಡಿ ತಿನ್ನೋದರಿಂದ ಹಲವು ಉಪಯೋಗಗಳು ಸಿಗುತ್ತವೆ.

suddionenews

Recent Posts

ಕೋರ್ಟ್ ನಿರ್ಬಂಧ ಸಡಿಲಿಕೆ ; ಊರಿಗೆ ಬಂದ ಭವಾನಿ ರೇವಣ್ಣರಿಗೆ ಹೂವಿನ ಸ್ವಾಗತ.. ನನಗೆ ಮುಜುಗರವಾಗುತ್ತೆ ಅಂದಿದ್ಯಾಕೆ ದೊಡ್ಡಗೌಡ್ರ ಸೊಸೆ..?

ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…

8 hours ago

ರಾಜ್ಯದ ಮುಂದಿನ ಸಿಎಂ ಬಗ್ಗೆ ಕೋಡಿಶ್ರೀ ಭವಿಷ್ಯ ; ಏನಂದ್ರು ಸ್ವಾಮೀಜಿ..?

ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…

9 hours ago

ಹಿರಿಯೂರು : ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್ ವ್ಯತ್ಯಯ

ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…

10 hours ago

ಬಿರು ಬೇಸಿಗೆಯ ನಡುವೆ ಮಳೆಯ ಅಬ್ಬರ ; ವಾಣಿ ವಿಲಾಸ ಸೇರಿದಂತೆ ಯಾವ ಜಲಾಶಯದಲ್ಲಿ ಎಷ್ಟಿದೆ ನೀರು..?

ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…

10 hours ago

ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಶೀಘ್ರ ಅನುಷ್ಠಾನಗೊಳಿಸಿ : ಎಂ.ಆರ್.ಶಿವರಾಜ್

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…

10 hours ago

ಎಲ್ಲೆಡೆ ನಿಂಗೆ ದುಷ್ಮನ್ ಗಳಿದ್ದಾರೆ ; ರಿಷಬ್ ಶೆಟ್ಟಿಗೆ ದೈವ ನೀಡಿದ ಎಚ್ಚರಿಕೆ ಏನು..?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…

10 hours ago