Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿದ ಕಾಟಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ನಗರದ ದೊಡ್ಡಪೇಟೆ ಬಳಿಯ ಕೆಂಚನಾರಹಟ್ಟಿಯಲ್ಲಿರುವ ಕಾಡುಗೊಲ್ಲರ ಆರಾಧ್ಯ ದೈವ ಕಾಟಲಿಂಗೇಶ್ವರಸ್ವಾಮಿಯ ಕಾಳು ಹಬ್ಬದ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಫೆ.27 ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಕೆಂಚನಾರ ಗೊಲ್ಲರು, ಬಾಲೇನರ ಗೊಲ್ಲರು ಗುಡಿಕಟ್ಟಿನ ಅಣ್ಣತಮ್ಮಂದಿರು, ಗೌಡರು, ಯಜಮಾನರುಗಳು ಸೇರಿಕೊಂಡು ಸ್ವಾಮಿಯನ್ನು ಸೋಮವಾರ ಬೆಳಿಗ್ಗೆ ದೇವಸ್ಥಾನದಿಂದ ಕಾಲುನಡಿಗೆ ಮೂಲಕ ತೆಗೆದುಕೊಂಡು ಹೋಗಿ ಚಿತ್ರದುರ್ಗ ಸಮೀಪವಿರುವ ಹೊಸದ್ಯಾಮವ್ವನಹಳ್ಳಿ ಬಳಿ ಮೂಲ ಸ್ಥಾನವಿರುವ ಪೌಳಿಯ ಹತ್ತಿರ ವರ್ತಿ ತೆಗೆದು ಅದರಲ್ಲಿ ಸಿಗುವ ಗಂಗಾಜಲದಿಂದ ಸ್ವಾಮಿಗೆ ಜಲಾಭಿಷೇಕ, ಹಾಲು, ಮೊಸರು, ಜೇನುತುಪ್ಪ ಅಭಿಷೇಕ ಪೂಜೆಗೈದು ನಂತರ ದೇವರುಗಳನ್ನು ಪೌಳಿಯಲ್ಲಿರುವ ಮೂಲ ಸ್ಥಾನದಲ್ಲಿ ಕುಳ್ಳಿರಿಸಿ ಕರಿಕಂಬಳಿ ಗದ್ದುಗೆ ಹಾಸಿ ಕಾಳು ಬೇಯಿಸಿ ರಾಶಿ ಹಾಕಿ ಬಾಳೆಹಣ್ಣು, ಎಲೆ ಅಡಿಕೆ, ಕಾಯಿ, ತಂಬಿಟ್ಟು, ಚಿಗಳಿ ಇನ್ನಿತರೆ ಪೂಜಾ ಸಾಮಾಗ್ರಿಗಳನ್ನಿಟ್ಟು ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನಂತರ ಅಲ್ಲಿ ಬಂದಂತಹ ಭಕ್ತರಿಗೆ ಅನ್ನಸಂತರ್ಪಣೆ ವಿನಿಯೋಗಿಸಲಾಯಿತು.

ಸಂಜೆ ಮೂಲ ಸ್ಥಾನದಿಂದ ದೇವರುಗಳನ್ನು ಪಾದಯಾತ್ರೆಯಲ್ಲಿ ಚಿತ್ರದುರ್ಗಕ್ಕೆ ಕರೆ ತಂದು ರಂಗಯ್ಯನಬಾಗಿಲು ಬಳಿಯಿರುವ ರಾಮಾಂಜನೇಯ ದೇವಸ್ಥಾನ ಹತ್ತಿರ ರಾತ್ರಿ ದೇವರುಗಳನ್ನು ಹೂಗಳಿಂದ ಅಲಂಕರಿಸಿ ವಿವಿಧ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಮೂಲಕ ದೊಡ್ಡಪೇಟೆ, ದೊಡ್ಡಗರಡಿ, ಕರುವಿನಕಟ್ಟೆ ವೃತ್ತದ ಮೂಲಕ ಸಾಗಿ ಕೆಂಚನಾರಹಟ್ಟಿಯಲ್ಲಿರುವ ದೇವಸ್ಥಾನಕ್ಕೆ ಮರಳಿ ತಲುಪಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಟ ಶಿವರಾಜ್ಕುಮಾರ್ ಅವರಿಗೆ ಬಿಗ್ ಆಫರ್ ನೀಡಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಇಂದು ಈಡಿಗ ಸಮುದಾಯದ ಸಮಾವೇಶ ನಡೆಯುತ್ತಿದೆ. ಈ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಧು ಬಂಗಾರಪ್ಪ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಇದೇ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಿವಣ್ಣನಿಗೆ

ಬಿಕೆ ಹರಿಪ್ರಸಾದ್ ಚಡ್ಡಿ ವಿಚಾರಕ್ಕೆ ಪ್ರಹ್ಲಾದ್ ಜೋಶಿ ಗರಂ..!

ಹುಬ್ಬಳ್ಳಿ: ಸಚಿವ ಸ್ಥಾನ ಸಿಗದೆ ಇರುವ ಕಾರಣಕ್ಕೆ ಬಿಕೆ ಹರಿಪ್ರಸಾದ್ ಕಾಂಗ್ರೆಸ್ ನಲ್ಲಿ ಕೆಂಡಾಮಂಡಲರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಇತ್ತಿಚೆಗೆ ಪರೋಕ್ಷವಾಗಿಯೂ ಕಿಡಿಕಾರಿದ್ದರು. ಪಂಚೆ ಹಾಕಿಕೊಂಡು, ಹ್ಯೂಬ್ಲೋಟ್ ವಾಚ್ ಕಟ್ಟಿಕೊಂಡು, ಒಳಗೆ ಖಾಕಿ

ಡಿಕೆಶಿ ಸಿಎಂ ಆಗ್ತಾರೆ : ನೊಣವಿನಕೆರೆ ಸ್ವಾಮೀಜಿಗಳ ಭವಿಷ್ಯಕ್ಕೆ ಕುಮಾರಸ್ವಾಮಿ ಏನಂದ್ರು..?

ಕಾಂಗ್ರೆಸ್ ನಲ್ಲಿ ಸಿಎಂ ವಿಚಾರ ಆಗಾಗ ಮುನ್ನೆಲೆಗೆ ಬಂದು ನಿಲ್ಲುತ್ತದೆ. ಡಿಕೆ ಶಿವಕುಮಾರ್ ಬೆಂಬಲಿಗರು ಆದಷ್ಟು ಬೇಗ ನಮ್ಮ ನಾಯಕ ಸಿಎಂ ಆಗಲಿ ಎಂದೇ ಹಾರೈಸುತ್ತಿದ್ದಾರೆ. ಇದರ ನಡುವೆ ನೊಣವಿ‌ಕೆರೆ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ.

error: Content is protected !!