ಮಂಡ್ಯದಲ್ಲಿ ಸಂಸದೆ ಸುಮಲತಾ ಬೆಂಬಲ ಕಾಂಗ್ರೆಸ್ ಅಭ್ಯರ್ಥಿಗಾ.. ಬಿಜೆಪಿ ಅಭ್ಯರ್ಥಿಗಾ..?

suddionenews
1 Min Read

ಮಂಡ್ಯ: ಈ ಗೊಂದಲ ಸುಮಲತಾ ಬೆಂಬಲಿಗರಲ್ಲೂ ಮನೆ ಮಾಡಿದೆ. ನಾವೂ ಯಾವ ಅಭ್ಯರ್ಥಿಗೆ ಸಪೋರ್ಟ್ ಮಾಡೋದು ಅಂತ ತಿಳಿಯದೆ ತಟಸ್ಥರಾಗಿದ್ದಾರದ. ಕಾರಣ ಸುಮಲತಾ ಯಾರಿಗೆ ಬೆಂಬಲ ನೀಡ್ತಾರೆ ಅನ್ನೋದು ಅವರಿಗೂ ಇನ್ನು ತಿಳಿದಿಲ್ಲ.‌ಯಾಕಂದ್ರೆ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಂತಿದ್ದರು. ಆಗ ಅವರಿಗೆ ಬಿಜೆಪಿಗರು ನೇರವಾಗಿಯೇ ಸಪೋರ್ಟ್ ಮಾಡಿದ್ರು. ಕಾಂಗ್ರೆಸ್ ನ ಕೆಲ ಬೆಂಬಲಿಗರು, ಕಾರ್ಯಕರ್ತರು ಕೂಡ ತೆರೆಮರೆಯಲ್ಲಿ ಸುಮಲತಾ ಅವರಿಗೆ ಸಪೋರ್ಟ್ ಮಾಡಿದ್ರು. ಹೀಗಾಗಿ ಈ ಬಾರಿ ಎಲ್ಲರ ಚಿತ್ತ ಸುಮಲತಾ ಅವರತ್ತ ನೆಟ್ಟಿದೆ.

ಈ ಮಧ್ಯೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬೂಕನಹಳ್ಳಿ ಮಂಜು, ನಾನು ಸುಮಲತಾ ಅವರ ಬಳಿ ಮಾತನಾಡುತ್ತೇನೆ. ಅವರ ಬೆಂಬಲವನ್ನ ಕೇಳುತ್ತೇನೆ. ಚುನಾವಣಾ ಸಮಯದಲ್ಲಿ ಅವರ ಗೆಲುವುಗಾಗಿ ಕೆಲಸ ಮಾಡಿದ್ದೇವೆ. ಅವರ ಗೆಲುವನ್ನ ನಮ್ಮ ಗೆಲುವು ಎಂದು ಸಂಭ್ರಮಿಸಿದ್ದೇವೆ. ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದೇನೆ. ಇನ್ನು ಖುದ್ದಾಗಿ ಹೋಗಿ ಭೇಟಿ‌ ಮಾಡುತ್ತೇನೆ.

ಬಿಜೆಪಿ ಋಣ ತೀರಿಸಲು ಸುಮಲತಾ ಅವರಿಗೆ ಒಳ್ಳೆಯ ಅವಕಾಶವಿದು. ಅವರು ನಮಗೆ ಬೆಂಬಲ‌ ನೀಡುವ ಭರವಸೆ ಇದೆ ಎಂದು ಬೂಕನಹಳ್ಳಿ ಮಂಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ಸುಮಲತಾ ಯಾರ ಕಡೆ ಒಲವು ತೋರಿಸುತ್ತಾರೆ ಎಂಬುದರ ಮೇಲೆ ಕಾರ್ಯಕರ್ತರು, ಬೆಂಬಲಿಗರು ಅಲರ್ಟ್ ಆಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *