ಕಲಿಯುಗದ ಅಂತ್ಯವಾಗಲಿದೆ.. ರಾಜಕೀಯದಲ್ಲಿ ದೊಡ್ಡ ಬದಲಾವಣೆ; ಕಾಲಜ್ಞಾನಿ ಮುತ್ತ್ಯ ಶಾಕಿಂಗ್ ಭವಿಷ್ಯ

ಸದಾಶಿವ ಮುತ್ತ್ಯ ಭವಿಷ್ಯವಾಣಿ ಎಂದರೆ ಲಕ್ಷಾಂತರ ಜನರ ನಂಬಿಕೆಯಾಗಿದೆ.‌ ಇದೀಗ 2025ರ ಸ್ಪೋಟಕ ಭವಿಷ್ಯವನ್ನ ಇದಿಒಗ ಮುತ್ತ್ಯ ನುಡಿದಿದ್ದಾರೆ. ವಿಜಯಪುರದ ಬೆಂಕಿ ಬಬಲಾದಿ ಮಠದ ಸದಾಶಿವ ಮುತ್ತ್ಯಾನಮಠದ ಸದಾಶಿವ ಮುತ್ತ್ಯಾ ಭವಿಷ್ಯ ಕೇಳಿ ಭಕ್ತರು ದಿಗ್ಬ್ರಾಂತರಾಗಿದ್ದಾರೆ. ಕಲಿಯಿಗ ಕಾಲದ ಆಟ ಸರ್ವನಾಶ ಹೊಂದುವ ಸಮಯ ಬಂದಿತು ತಿಳಿಯಿರಣ್ಣ ಎಂದು ಹೇಳಲಾಗಿದೆ.

ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಿರುವುಗಳಾಗಲಿದ್ದು, ಹಣದ ಜೊತೆಗೆ ಜನರಿಗೆ ಬಂಧುತ್ವದ ಬಗ್ಗೆ ತಿಳಿಯುವ ಸಮಯ ಬಂದಿತು, ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆಯಾಗಬಹುದು ಎಂದು ಹೇಳಿರುವುದು ಜನರಿಗೆ ಆತಂಕ ತಂದೊಡ್ಡಿದೆ. ಕಾಡ್ಗಿಚ್ಚಿನ ಮುನ್ಸೂಚನೆಯನ್ನು ನೀಡಿದ್ದು, ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ನಿರೀಕ್ಷೆಗೂ ಮೀರಿದ ಕಾಯಿಲೆಗಳು ಬರಲಿವೆ ಎಂದಿದ್ದಾರೆ.

ಇನ್ನು ರಾಜಕೀಯದ ಬಗ್ಗೆಯೂ ಭವಿಷ್ಯದಲ್ಲಿ ತಿಳಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗಲಿವೆ ಎಂಬ ಸೂಚನೆಯನ್ನು ನೀಡಿದೆ. ಇದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರ ಆರ್ಥಿಕತೆಯಲ್ಲಿ ಸಮಸ್ಯೆಯನ್ನು ಎದುರಿಸಲಿದೆ ಎಂದು ಭವಿಷ್ಯದಲ್ಲಿ ನಮೂದಿಸಿದ್ದಾರೆ. ಈ ವರ್ಷ ಮಾನವೀಯತೆ, ಮನುಷ್ಯತ್ವದ ಹೊಸ ಸಂಚಲನ ಸೃಷ್ಟಿಯಾಗಲಿದೆ‌. ಧರ್ಮ ಧರ್ಮಗಳ ನಡುವೆ ಸಂಘರ್ಷ ನಡೆಯುತ್ತವೆ. ದೇಶದಲ್ಲಿ ಕಳ್ಳರ ಕಾಟ ಹೆಚ್ಚಾಗಲಿದೆ. ಮಳೆ ಬೆಳೆ ಕಡಿಮೆ ಇರಲಿದೆ. ರಾಷ್ಟ್ರದ ನಾಯಕರಿಗೆ ಅನಿಷ್ಠ ಕಾದಿದೆ. ಆಳುವ ಮಹಾ ನಾಯಕರಿಗೆ ಆಪತ್ತು ಕಾದಿದೆ ಎಂದು ಮುತ್ತ್ಯಾ ತಮ್ಮ ಭವಿಷ್ಯವನ್ನ ನುಡಿದಿದ್ದಾರೆ. ಇದು ಸಹಜವಾಗಿಯೇ ಸಾಮಾನ್ಯ ಮನುಷ್ಯರಿಗೆ ಆತಂಕವನ್ನು ಸೃಷ್ಟಿಸಿದೆ. ಮುತ್ತ್ಯಾ ಭವಿಷ್ಯವನ್ನು ನಂಬುವವರು ಹೆಚ್ಚಾಗಿದ್ದಾರೆ.

suddionenews

Recent Posts

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ, ಈ ರಾಶಿಯವರ ಭಾಗ್ಯ ಎನ್ನಬೇಕೋ ಪುಣ್ಯ…

3 hours ago

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

13 hours ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

13 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

13 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

13 hours ago

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ ; ಯಾರೀ ನೈನಾರ್ ನಾಗೇಂದ್ರನ್..?

    ಚೆನ್ನೈ; ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಕೊಟ್ಟ ಬಳಿಕ ಇದೀಗ ಅವಿರೋಧ ಆಯ್ಕೆ ಮಾಡಲಾಗಿದೆ.…

14 hours ago