ವಿಜಯಪುರ: ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಮಾಡಿದ್ದು, ಈ ವೇಳೆ ತಮ್ಮ ಭಾಷಣದಲ್ಲಿ ಧರ್ಮ, ದೇಶದ ಬಗ್ಗೆ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. ಜೀವನದಲ್ಲಿ ಇವತ್ತಿನಿಂದ ವೇದಿಕೆ ಮೇಲೆ ಒಂದು ಪ್ರತಿಜ್ಞೆ ಮಾಡುತ್ತೇನೆ. ಜಾತಿಯ ಬಗ್ಗೆ ಇಲ್ಲ ದೇಶವನ್ನ, ಧರ್ಮವನ್ನ ಉಳಿಸ್ತೀನಿ ಅಂತ ಪ್ರತಿಜ್ಞೆ ಮಾಡುತ್ತೇನೆ. ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿ, ಪ್ರಾಣವನ್ನು ಬಲಿದಾನ ಮಾಡಿ, ಅವರೆಲ್ಲರೂ ಇವತ್ತು ಸ್ವರ್ಗದಲ್ಲಿದ್ದಾರೆ. ಅವರ್ಯಾರಿಗೂ ಆತ್ಮಕ್ಕೆ ತೃಪ್ತಿ ಇಲ್ಲ. ಸ್ವರ್ಗದಲ್ಲಿರುವ ಸ್ವತಂತ್ರ್ಯ ಹೋರಾಟಗಾರರಿಗೆ ಸಮಾಧಾನವಿಲ್ಲ. ಇಂದು ಜಾತಿಗೋಸ್ಕರ ಬಡಿದಾಡುತ್ತೀವಿ ಅಂದ್ರೆ ನಾವ್ಯಾಕೆ ಬಲಿದಾನ ಮಾಡಬೇಕಿತ್ತು ಅಂತ ಬಹಳ ಚಿಂತೆಯಲ್ಲಿದ್ದಾರೆ.
ಇವತ್ತು 1008 ಸ್ವಾಮಿಗಳ ಪಾದವನ್ನು ಮುಟ್ಟಿ, ವೇದಿಕೆ ಮೇಲಿನ ಸ್ವಾಮೀಜಿಗಳು ಸೇರಿ ಸಾವಿರಾರು ಸ್ವಾಮಿಗಳಿದ್ದಾರೆ. ಇವತ್ತು ನಾವೂ ಪ್ರತಿಜ್ಞೆ ಮಾಡೋಣಾ ಈ ದೇಶವನ್ನು, ಧರ್ಮವನ್ನು ಜಾತಿ ಬಿಟ್ಟು ಪಕ್ಷ ಬಿಟ್ಟು ಉಳಿಸ್ತೇವೆ ಎಂದು. ಬೇರೆಯವರು ಜಾತಿಯನ್ನು ಫಾಲೋ ಮಾಡಿದರೆ ನಾವೂ ಉದಾರವಾಗಿ ಹೋದರೆ ಅವರು ನಮ್ಮಿಂದ ಕಲಿಯುತ್ತಾರೆ. ನಾವೆಲ್ಲರೂ ಧರ್ಮ ಧರ್ಮ ಎಂಬುದನ್ನ ಮರೆತಿದ್ದೀವಿ. ಗೋವು ನಮ್ಮೆಲ್ಲರ ಗೋಮಾತೆ. ಇಂದು ಗೋಮಾತೆಯ ಪರಿಸ್ಥಿತಿ ಏನಾಗಿದೆ. ಚಾಮರಾಜಪೇಟೆಯಲ್ಲಿ ಕೆಚ್ಚಲನ್ನ ಕಟ್ ಮಾಡಿದ್ದಾರೆ, ಗೋವನ್ನ ಕಡಿದು ಮಾಂಸ ಮಾರಾಟ ಮಾಡ್ತಾ ಇದಾರೆ. ಕಣ್ಣೆದುರಿಗೆ ಗೋವಿನ ಬಾಲ ಕಟ್ ಮಾಡುತ್ತಿದ್ದಾರೆ.
ಇದೆಲ್ಲವನ್ನು ನೋಡಿಕೊಂಡು ಸುಮ್ಮನೆ ಕೂತರೆ ನಾವೂ ಬದುಕಿದ್ದು ಸತ್ತಂಗೆ. ಇನ್ಮುಂದೆ ನಮ್ಮ ಗೋಮಾತೆಯನ್ನ ಯಾರಾದ್ರೂ ಕಡಿದರೆ ನಾವೂ ತೀರ್ಮಾನ ಮಾಡೋಣಾ ಅವರ ಕೈಯನ್ನ ನಾವೂ ಕಡಿಯುತ್ತೇವೆ ಎಂಬುದರ ಪಣ ತೊಡೋಣಾ. ಗೋಮಾತೆಯನ್ನು ಕಡಿಯುತ್ತಾರೆ ಅಂದ್ರೆ ಯಾಕ್ರೀ ನಾವೂ ಬದುಕಿರಬೇಕು ಎಂದು ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದಾರೆ.
ಕಳೆದ ಬಾರಿ ಬಿಗ್ ಬಾಸ್ ಒಟಿಟಿ ಮೂಲಕ ನಂದು ಹಾಗೂ ಜಶ್ವಂತ್ ಎಲ್ಲರಿಗೂ ಪರಿಚಿತರಾಗಿದ್ದರು. ಇಬ್ಬರು ರಿಯಕ್ ಆಗಿನೆ ಪ್ರೇಮ…
ಪ್ರಯಾಗ್ ರಾಜ್: 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳವನ್ನು ಕಣ್ತುಂಬಿಕೊಳ್ಳುವುದಕ್ಕೆ ದೇಶದ ಜನ ಪ್ರಯಾಗ್ ರಾಜ್ ಗೆ ಭೇಟಿ ನೀಡುತ್ತಾ…
ಶಿವಮೊಗ್ಗ: ಅಡಿಕೆ ಬೆಳೆಯಿಂದ ಒಳ್ಳೆ ಲಾಭವೇನೋ ಬರುತ್ತೆ. ಆದರೆ ಅದನ್ನ ಯಾವುದೇ ರೋಗ ಬರದಂತೆ ಕಾಪಾಡುವುದೇ ದೊಡ್ಡ ಸವಾಲಿನ…
ಚಿತ್ರದುರ್ಗ. ಫೆ.04 : ಸವಿತಾ ಸಮಾಜ ಬಾಂಧವರು ಶ್ರಮ ಹಾಗೂ ಕಾಯಕ ಜೀವಿಗಳಾಗಿದ್ದಾರೆ. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಸುಂದರವಾಗಿ ಕಾಣುತ್ತಿದ್ದಾರೆ…
ಹಿರಿಯೂರು : ನಗರದ ದಕ್ಷಿಣ ಕಾಶಿಯೆಂದು ಹೆಸರಾಗಿರುವ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವದ ಜಾತ್ರೆ ನಿನ್ನೆಯಿಂದ (ಫೆಬ್ರವರಿ.…
ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯದಿಂದ ರೈತರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿ ಎಂದು ರೈತರ ಒತ್ತಾಯದ ಮೇರೆಗೆ ಸಚಿವ…