Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ನ ‘ಜಲಧಾರೆ’ಗೂ ಎದುರಾಗುತ್ತಾ ಕೊರೊನಾ ಕಂಟಕ..?

Facebook
Twitter
Telegram
WhatsApp

 

ಬೆಂಗಳೂರು: ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆಗೆ ಒತ್ತಾಯಿಸಿ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ಜೆಡಿಎಸ್ ನವರು ಜಲಧಾರೆ ಯಾತ್ರೆ ಮೂಲಕ ಜನರನ್ನ ಸೆಳೆಯಲು ಸಿದ್ದತೆ ನಡೆಸಿಕೊಂಡಿದ್ದರು. ಇದೇ ಜನವರಿ 26 ರಿಂದ ಜೆಡಿಎಸ್ ಜಲಾಧಾರೆ ಯಾತ್ರೆ ಆರಂಭವಾಗಬೇಕಿದೆ.

ಆದ್ರೆ ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಭಯದಲ್ಲಿ ಸರ್ಕಾರವೂ ಇದೆ, ಜನರು ಇದ್ದಾರೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಐದೆ ದಿನಕ್ಕೆ ಅಂತ್ಯವಾಗಿದ್ದು. ಇದೀಗ ಜೆಡಿಎಸ್ ನ ಜಲಧಾರೆಗೂ ಕೊರೊನಾ ಅಡ್ಡಿಯಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ರಾಜ್ಯದ ನಿರಾವರಿ ಯೋಜನೆಗಳ ಜಾರಿಗಾಗಿ ಮಹಾ ಸಂಕಲ್ಪ ಮಾಡುವ ಉದ್ದೇಶದಿಂದ ಜೆಡಿಎಸ್ ಜಲಧಾರೆ ಯೋಜನೆಯನ್ನ ಹಾಕಿಕೊಂಡಿದ್ದರು. ರ್ಯಾಲಿ, ಪಾದಯಾತ್ರೆ ಹೀಗೆ ಹೆಚ್ಚು ಜನ ಒಗ್ಗೂಡುವ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಜಲಧಾರೆ ಕಾರ್ಯಕ್ರಮಕ್ಕೆ ಆರಂಭಕ್ಕೂ ಮುನ್ನವೇ ವಿಘ್ನ ಕಾಡುತ್ತಿದೆ.

ಇನ್ನು ಈಗಾಗಲೇ ಜೆಡಿಎಸ್ ನಲ್ಲೆ ಈ ಯಾತ್ರೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೊರೊನಾ ಟಫ್ ರೂಲ್ಸ್ ಮುರಿದು, ಕೊರೊನಾ ಹೆಚ್ಚಾದರೆ ಆ ಅಪವಾದ ಜೆಡಿಎಸ್ ಮೇಲೆಯೇ ಬರಲಿದೆ. ಹೀಗಾಗಿ ಆ ಅಪವಾದಕ್ಕಿಂತ ಕೊರೊನಾ ತಗ್ಗಿದ ಮೇಲೆಯೇ ಯಾತ್ರೆ ಕೈಗೊಳ್ಳುವ ಫ್ಲ್ಯಾನ್ ಜೆಡಿಎಸ್ ನವರದ್ದಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

error: Content is protected !!