in

ಮಂತ್ರಿಗಳು 40% ಕಮಿಷನ್ ತಗೋಳೋದು ನಿಜನಾ..? : ಸಚಿವ ಮಾಧುಸ್ವಾಮಿ ಹೇಳಿದ್ದೇನು..?

suddione whatsapp group join

ತುಮಕೂರು: ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ವರಿಸಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಆಗಾಗ ಈ ಕಮಿಷನ್ ವಿಚಾರ ಬೆಳಕಿಗೆ ಬರ್ತಾನೆ ಇರುತ್ತೆ. ಇದೀಗ ಮಾಧುಸ್ವಾಮಿ ಆಡಿದ ಮಾತುಗಳು ಸತ್ಯವಿರಬಹುದೇನೋ ಎಂಬಂತ ಚರ್ಚೆಗಳನ್ನು ಹುಟ್ಟು ಹಾಕಿದೆ.

ಇಂದು ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಗ ಪ್ರಶಾಂತ್ ಸೇರಿದಂತೆ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಂದು ಅಂದಾಜು ಲೆಕ್ಕದಲ್ಲಿ ಎಂಟು ಕೋಟಿಗೂ ಅಧಿಕವಾದ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡುವಾಗ ಸಚಿವ ಮಾಧುಸ್ವಾಮಿ ಅವರು, 40% ದಂಧೆ ಮಾಡೋಕೆ ಅವರ್ಯಾರು ಮಂತ್ರಿಗಳಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಮಾಧುಸ್ವಾಮಿ ಅವರು ಹೇಳಿದ್ದು ಹೀಗಿದೆ : 40% ಕಮಿಷನ್ ದಂಧೆ ಮಾಡೋಕೆ ಅವರ್ಯಾರು ಮಂತ್ರಿಯಲ್ಲ. ಸರ್ಕಾರಿ ನೌಕರರು. ಅವರು ಹೇಳದೆ ನಾವೂ ಉತ್ತರ ಕೊಡಲು ಸಾಧ್ಯವಿಲ್ಲ. ಶಾಸಕರಿಗೂ ಮಂತ್ರಿಗಳಿಗೂ ಏನಪ್ಪ ಸಂಬಂಧ..? ಎಂದು ಪ್ರಶ್ನಿಸಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

BJP ಶಾಸಕಿ..ಕಾಂಗ್ರೆಸ್ ಮಾಜಿ MLA ಕಿತ್ತಾಡಿಕೊಂಡು ಪರಸ್ಪರ ದೂರು ದಾಖಲು..!

ಮಾರ್ಚ್ 04 ರಂದು ಮುಖ್ಯಮಂತ್ರಿಗಳು ಯಾವೆಲ್ಲಾ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ ? ಇಲ್ಲಿದೆ ಸಂಪೂರ್ಣ ಮಾಹಿತಿ…!