ವೀಕೆಂಡ್ ಕರ್ಫ್ಯೂ ವೇಳೆಯೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಬಿಜೆಪಿ ಶಾಸಕ..!

suddionenews
1 Min Read

ದಾವಣಗೆರೆ : ಕೊರೊನಾ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ರಾಜ್ಯದಲ್ಲಿ ಟಫ್ ರೂಲ್ಸ್ ಜೊತೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದ್ರೆ ಈ ಕೊರೊನಾ ರೂಲ್ಸ್ ಅನ್ನ ಬಿಜೆಪಿ ನಾಯಕರೇ ಬ್ರೇಕ್ ಮಾಡುತ್ತಿದ್ದಾರೆ.

ಜಗಳೂರು ಕ್ಷೇತ್ರದ ಶಾಸಕ ಎಸ್ ವಿ ರಾಮಚಂದ್ರ ಅವರು ಗ್ರ್ಯಾಂಡ್ ಆಗಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಅದು ವೀಕೆಂಡ್ ಕರ್ಫ್ಯೂ ಇದ್ದಾಗ. ನೂರಾರು ಜನರನ್ನ ಸೇರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದು ಜನಾಕ್ರೋಶಕ್ಕೆ ಕಾರಣವಾಗಿದೆ.

ವೀಕೆಂಡ್ ಕರ್ಫ್ಯೂ ರೂಲ್ಸ್ ನ ಬ್ರೇಕ್ ಮಾಡಿದ್ರು, ಬಿಜೆಪಿ ಶಾಸಕನ ವಿರುದ್ಧ ಪೊಲೀಸರು ಕೂಡ ಕೇಸ್ ದಾಖಲಿಸಿಲ್ಲ. ಆದ್ರೆ ಜನಸಾಮಾನ್ಯರ ವಿರುದ್ಧ ಕೇಸ್ ದಾಖಲಾಗಿದೆ. ಶಾಸಕರ ಬರ್ತ್ ಡೇಗೆ ಪೊಲೀಸ್ ಠಾಣೆಯ ಸಿಪಿಐ ಗುರುಬಸವರಾಜ್ ಕೂಡ ಹಾಜರಾಗಿ ವಿಶ್ ಮಾಡಿದ್ದಾರೆ. ಜನಸಾಮಾನ್ಯರು ರೂಲ್ಸ್ ಬ್ರೇಕ್ ಮಾಡಿದ್ರೆ ಕೇಸ್ ಹಾಕ್ತಾರೆ.. ದೊಡ್ಡವರು ಮಾಡಿದ್ರೆ ಕಾನೂನಲ್ಲಿ ಶಿಕ್ಷೆ ಇಲ್ವ ಎಂಬುದು ಜನ ಸಾಮಾನ್ಯರ ಪ್ರಶ್ನೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *