ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ. ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು ಕೂಡ ಜಾಸ್ತಿ ಆಗುತ್ತದೆ. ಇದಕ್ಕಾಗಿ ಮಾತ್ರೆ ನುಂಗ್ತಾರೆ, ಟಾನಿಕ್ ಕುಡಿತಾರೆ. ಕೆಲವೊಂದಿಷ್ಟು ಮಂದಿಗೆ ಟೀ, ಕಾಫಿ ಕುಡಿದರೂ ಸಹ ಈ ಸಮಸ್ಯೆ ಎದುರಾಗುತ್ತದೆ. ಹಾಗಾದ್ರೆ ಈ ಪಿತ್ತದ ಸಮಸ್ಯೆಯಿಂದ ಪರಿಹಾರಕ್ಕಾಗಿ ಮನೆ ಮದ್ದನ್ನು ಬಳಸಬಹುದಾದರೆ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಒಂದು ವೇಳೆ ನಿಮಗೆ ಪಿತ್ತದ ಸಮಸ್ಯೆ ಎದುರಾದರೆ, ಬೇಗನೆ ಕಡಿಮೆಯಾಗಬೇಕು ಅಂದ್ರೆ ಪುನರ್ಪುಳಿ ಸಿಪ್ಲೆಗಳನ್ನ ತೆಗೆದುಕೊಂಡು ಅದಕ್ಕೆ ಅರ್ಧ ಲೋಟ ಆಗುವಷ್ಟು ಬಿಸಿ ನೀರನ್ನ ಹಾಕಿ. ಅದು ಬಣ್ಣ ಬಿಟ್ಟು ಕೊಳ್ಳುತ್ತದೆ. ಅರ್ಧ ಗಂಟೆಗಳ ಕಾಲ ನೆನೆಯಿಟ್ಟರೆ ಅದರಲ್ಲಿರುವ ಸತ್ವ ನೀರಿನಲ್ಲಿ ಬಿಟ್ಟುಕೊಳ್ಳುತ್ತದೆ. ಬಳಿಕ ಆ ನೀರನ್ನು ಒಂದು ಲೋಟಕ್ಕೆ ಸೇರಿಸಿಕೊಳ್ಳಿ. ಬಣ್ಣವೂ ಬಂದಿರುತ್ತದೆ.
ಆ ನೀರಿಗೆ ಸ್ವಲ್ಪ ಬೆಲ್ಲವನ್ನ ಬೆರೆಸಿಕೊಳ್ಳಿ. ಆ ನೀರನ್ನ ಒಂದು ಅಥವಾ ಎರಡು ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬನ್ನಿ ನಿಮ್ಮ ಪಿತ್ತ ಹೇಗೆ ಮಾಯವಾಗುತ್ತದೆ ನೋಡಿ. ಮತ್ತೊಂದು ಮಾಹಿತಿ ಪುನರ್ಪುಳಿ ಈ ಸಮಯದಲ್ಲಿಯೇ ಸಿಗಲಿದೆ. ಅಂದ್ರೆ ಏಪ್ರಿಲ್, ಮೇ ತಿಂಗಳಲ್ಲಿ. ಈಗಲೇ ಸಿಪ್ಪೆಯನ್ನು ಒಣಗಿಸಿ ಶೇಖರಣೆ ಮಾಡಿಟ್ಟುಕೊಂಡರೆ ಬಹಳ ಅನುಕೂಲವಾಗುತ್ತದೆ. ಹೀಗೆ ಪಿತ್ತ ಹೆಚ್ಚಾದಾಗ ಬಳಕೆಗೆ ಬರಲಿದೆ.
ಎಳ್ಳಿ ಕಾಯಿಯಿಂದಾನೂ ಪಿತ್ತವನ್ನು ಕಡಿಮೆ ಮಾಡಿಕೊಳ್ಳಬಹುದು. ಬೆಳಗ್ಗೆ ಎದ್ದ ಕೂಡಲೇ ಎಳ್ಳಿ ಕಾಯಿ ಹಾಕಿ ಮಾಡಿದ ಜ್ಯೂಸ್ ಅನ್ನು ಒಂದೆರಡು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಪಿತ್ತ ವಾಸಿಯಾಗುತ್ತದೆ, ತಲೆ ಸುತ್ತು ಕೂಡ ಬರುವುದಿಲ್ಲ.
ಭವಾನಿ ರೇವಣ್ಣ ಇಂದು ಹೊಳೆನರಸೀಪುರದ ತಮ್ಮ ಸ್ವಗೃಹಕ್ಕೆ ಬಂದಿದ್ದಾರೆ. ಅವರು ಬರುತ್ತಿದ್ದಂತೆ ಹೂಗಳ ಮಳೆ ಸುರಿಸಿ ಸ್ಚಾಗತಕೋರಿದ್ದಾರೆ. ಅವರ ಅಭಿಮಾನಿಗಳು…
ಕೋಡಿ ಮಠದ ಸ್ವಾಮೀಜಿಗಳ ಭವಿಷ್ಯದ ಬಗ್ಗೆ ಸಾಕಷ್ಟು ಕುತೂಹಲವಂತೂ ಇದ್ದೇ ಇರುತ್ತದೆ. ರಾಜ್ಯ ಮಳೆ, ಬೆಳೆ, ರಾಜಕಾರಣದ ಬಗ್ಗೆ ಭವಿಷ್ಯ…
ಹಿರಿಯೂರು. ಏ.07: ಹಿರಿಯೂರು ಉಪ ವಿಭಾಗದ ವ್ಯಾಪ್ತಿಯ ಹಿರಿಯೂರು ಪಟ್ಟಣದಲ್ಲಿ ಇದೇ ಏಪ್ರಿಲ್ 8 ರಿಂದ 10 ರವರೆಗೆ ವಿದ್ಯುತ್…
ಚಿತ್ರದುರ್ಗ; ಬಿರು ಬೇಸಿಗೆಯಲ್ಲಿ ಬೆಂದಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಮಳೆರಾಯನ ಆಗಮನದಿಂದ ಭೂಮಿಯೂ ತಂಪಾಗಿದೆ. ಕಳೆದ ಬಾರಿ ಮುಂಗಾರು ಹಾಗೂ…
ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 07 : ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ಘೋಷಣೆ ರಾಜ್ಯ…
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ.…