Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಆತ ಕೈ ಮುಗಿದಿದ್ದು ವಿಗ್ರಹವನ್ನೇ ಎಸ್ಕೇಪ್ ಮಾಡೋಕೆ..!

Facebook
Twitter
Telegram
WhatsApp

 


ಬೆಳಗಾವಿ: ಇತ್ತೀಚೆಗೆ ಕಳ್ಳರು ದೇವರಿಗೂ ಹೆದರದೇ ದೇವರನ್ನೇ ಟಾರ್ಗೆಟ್ ಮಾಡ್ತಿರುವ ಘಟನೆಗಳು ನಡೆಯುತ್ತಿವೆ. ದೇವರ ಹುಂಡಿ ಕದ್ದರೆ ದೇವರ ಶಿಕ್ಷೆಗೆ ಗುರಿಯಾಗ್ತೀವೇನೋ ಎಂಬ ಭಯ ಕಳ್ಳರಲ್ಲಿತ್ತು. ಆದ್ರೆ ಅದೇಕೋ ಏನೋ ದೇವರನ್ನೇ ಎಸ್ಕೇಪ್ ಮಾಡುವ ಬುದ್ದಿ ಬಂದಿದೆ. ಈ ಹಿಂದೆ ಕೂಡ ದೇವರ ವಿಗ್ರಹದಲ್ಲಿದ್ದ ಮಾಂಗಲ್ಯವನ್ನ ಕದ್ದಿದ್ದನ್ನ ನೋಡಿದ್ವಿ ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೂ ಒಂದೆಜ್ಜೆ ಮುಂದೆ ಹೋಗಿ ದೇವರನ್ನೇ ಎಸ್ಕೇಪ್ ಮಾಡಿ ಹೋಗಿದ್ದಾನೆ.

ಈ ಘಟನೆ ನಡೆದಿರೋದು ನಗರದ ಪಾಂಗೋಳ ಗಲ್ಲಿಯಲ್ಲಿ. ಈ ದೇವಾಸ್ಥಾನ ದೇಶದ ಏಕೈಕ ಅಶ್ವತ್ಥಾಮ ದೇವಾಲಯ ಎಂಬ ಖ್ಯಾತಿಗೆ ಒಳಗಾಗಿದೆ. ಈಗ ಆ ಕಳ್ಳ ಈ ದೇವಾಲಯದ ಮೂರ್ತಿಯನ್ನೇ ಕದ್ದು ಪರಾರಿಯಾಗಿದ್ದಾನೆ.

ದೇವರ ಮೂರ್ತಿ ಕದಿಯುವುದಕ್ಕೂ ಮುನ್ನ ಆತ ದೇವರಿಗೆ ಭಕ್ತಿಯಿಂದಲೇ ಕೈ ಮುಗಿದು ನಮಸ್ಕರಿಸಿದ್ದಾನೆ. ಆಗಲೇ ಬೇಡಿಕೊಂಡಿದ್ದನೋ ಏನೋ ನಿನ್ನನ್ನೇ ಕದಿಯುತ್ತಿದ್ದೇನೆ ಕ್ಷಮಿಸು ಅಂತ. ಕೈ ಮುಗುದ ಬಳಿಕ ಮೂರ್ತಿಯನ್ನೇ ಕಳ್ಳತನ ಮಾಡಿದ್ದಾನೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಟಿ ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ಮಾಡಿದ್ದಾರೆ. ಕಳ್ಳನನ್ನ ಹುಡುಕಲು ಆರಂಭಿಸಿದ್ದಾರೆ.

ಇನ್ನು ನಗರದಲ್ಲಿ ಈಗಾಗಲೇ ಸಾಕಷ್ಟು ಕಳ್ಳತನ ಪ್ರಕರಣಗಳು ದಾಖಲಾಗಿವೆ. ತಾಳಿ ಸರ, ಬೈಕ್ ಸೇರಿದಂತೆ ಅನೇಕ ವಸ್ತುಗಳು ಸರಣಿ‌ ಕಳ್ಳತನವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ ?

ಸುದ್ದಿಒನ್ : ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಇದರಿಂದಾಗಿ ಅನೇಕರು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬೇಸಿಗೆಯ ಧಗೆಗೆ ತಕ್ಕಂತೆ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸಬೇಕು. ಈ ಬೇಸಿಗೆಯಲ್ಲಿ ಪ್ರತಿದಿನ ಸೌತೆಕಾಯಿಯನ್ನು ತಿನ್ನುವುದು ಒಳ್ಳೆಯದು.

error: Content is protected !!