ಕಾಂಗ್ರೆಸ್ ಬಿಡಲು ರೆಡಿಯಾದ ಇಬ್ರಾಹಿಂ: ದೋಸ್ತಿ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು..?

1 Min Read

 

ಬೆಂಗಳೂರು: ಕಾಂಗ್ರೆಸ್ ನ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಪಕ್ಷ ಬಿಡಲು ರೆಡಿಯಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಸಿ ಎಂ ಇಬ್ರಾಹಿಂ ತೀರಾ ಆತ್ಮೀಯರು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ ಕೂಡ. ಇದೀಗ ಆತ್ಮೀಯರು ಪಕ್ಷ ಬಿಡುತ್ತಿದ್ದು, ಆ ಬಗ್ಗೆ ಸಿದ್ದರಾಮಯ್ಯ ರಿಯಾಕ್ಟ್ ಮಾಡಿದ್ದಾರೆ.

ಇಬ್ರಾಹಿಂ ನನಗೆ ತುಂಬಾ ಕ್ಲೋಸ್ ಫ್ರೆಂಡ್. ಹೀಗಾಗಿ ಕಾಂಗ್ರೆಸ್ ಪಕ್ಷ ಬಿಡುವ ಮಾತೇ ಇಲ್ಲ. ಅವರು ಏನೇ ಹೇಳಿದ್ರು ನನಗೆ ವಿಶ್ ಮಾಡಿದಂತೆ‌. ಇಬ್ರಾಹಿಂ ನನಗೋಸ್ಕರ ಸ್ಪೆಷಲ್ ಬಿರಿಯಾನಿ ಮಾಡಿಸ್ತಾನೆ. ಮನೆಗೆ ಕರೆದು ಬಿರಿಯಾನಿ ಹಾಕಿಸ್ತಾನೆ. ಮುಂದೆ ಕೂಡ ನನಗೋಸ್ಕರ ಸ್ಪೆಷಲ್ ಬಿರಿಯಾನಿ ಮಾಡಿಸಿ ಕರೆದಾಗ ಹೋಗ್ತೇನೆ.

ಇನ್ನು ಸಿ ಎಂ ಇಬ್ರಾಹಿಂ ಜೆಡಿಎಸ್ ಪಕ್ಷ ಬಿಟ್ಟಿದ್ದು ನನಗೋಸ್ಕರ ಅಲ್ಲ. ತಮಿಳುನಾಡಿನಿಂದ ರಾಮಸ್ವಾಮಿಯವರನ್ನ ಕರೆತಂದು ರಾಜ್ಯಸಭಾ ಸ್ಥಾನ ಕೊಟ್ಟಿದ್ದಕ್ಕೆ. ರಾಜ್ಯಸಭಾ ಸ್ಥಾನ ಸಿಗಲಿಲ್ಲವೆಂದೆ ಕಾಂಗ್ರೆಸ್ ಬಿಟ್ಡಿದ್ದು ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *