ಮಹಾರಾಜರ ನಂತರ ಅತಿ ಹೆಚ್ಚು ಲೀಡ್ ನಲ್ಲಿ ಗೆದ್ದಿರೋದು ನಾನೇ : ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು..?

1 Min Read

ಮೈಸೂರು: ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಅವರು ತಮ್ಮನ್ನು ತಾವೇ ಹೊಗಳಿಕೊಂಡಿದ್ದಾರೆ. ಮೈಸೂರು ಮಹಾರಾಜರ ಬಳಿಕ ಹೆಚ್ಚು ಅಭಿವೃದ್ಧಿ ಮಾಡಿದ್ದು ನಾನೇ ಎಂದಿದ್ದಾರೆ.

ಗೋವಾಗೆ ಹೋಗುವ ಫ್ಲೈಟ್ ತಂದಿದ್ದು ನಾನೇ, ಪಾಸ್ ಪೋರ್ಟ್ ಸೇವಾ ಕೇಂದ್ರ ಮಾಡಿಸಿದ್ದು ನಾನೇ, ಕೆ ಆರ್ ಕ್ಷೇತ್ರದ ಕಸ ಸಮಸ್ಯೆ ನಿವಾರಿಸಿದ್ದು ನಾನೇ. ಮೈಸೂರು ಮಹಾರಾಜರ ಬಳಿಕ ನಾನೇ ಹೆಚ್ಚು ಅಭಿವೃದ್ಧಿ ಮಾಡಿರುವುದು.

ಶಾಸಕ ಎಲ್ ನಾಗೇಂದ್ರ ಅವರು ತಾವೇ ಅಭಿವೃದ್ಧಿ ಮಾಡಿರುವುದು ಎಂಬ ಭ್ರಮೆಯಲ್ಲಿದ್ದಾರೆ. 300 ಕೋಟಿಯ ಅಭಿವೃದ್ಧಿ ಮಾಡಿದ್ದೀನಿ ಅಂತ ಹೇಳ್ತಾರೆ. 300 ಅಲ್ಲ 3 ಕೋಟಿಯ ಕೆಲಸವನ್ನು ಮಾಡಿಲ್ಲ ಅವರು. ಮೈಸೂರು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಬಾರಿ ಗೆದ್ದಿರುವುದು ನಾನು. ಆ ಮೂಲಕ ಮಹಾರಾಜರ ಬಳಿಕ ಅತಿ ಹೆಚ್ಚು ಲೀಡ್ ನಲ್ಲಿ ಗೆದ್ದಿರುವುದು ನಾನೇ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *