ಸಮ್ಮಿಶ್ರ ಸರ್ಕಾರ ಬೀಳಿಸೋದಕ್ಕೆ ನಾನು ಕಷ್ಟಪಟ್ಟಿದ್ದೇನೆ : ಶಾಸಕ ರೇಣುಕಾಚಾರ್ಯ

suddionenews
1 Min Read

 

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಈ ಹಿಂದೆ‌ ಕೂಡ ಬೇಸರ ವ್ಯಕ್ತಪಡಿಸಿದ್ದರು. ಸಚಿವರಾದವರೇ ಮತ್ತೆ ಮತ್ತೆ ಸಚಿವರಾಗ್ತಾ ಇದ್ದಾರೆ. ನಮಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು. ಇದೀಗ ಮತ್ತೆ ಅದನ್ನೆರ ಉಚ್ಛಾರ ಮಾಡಿದ್ದಾರೆ.

ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾಕೆ ನಮಗೆ ಸಚಿವರಾಗಲು ಯೋಗ್ಯತೆ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಸರ್ಕಾರವನ್ನ ಬೀಳಿಸಲು ನಾನು ಮತ್ತು ಶಾಸಕ ಯತ್ನಾಳ್ ಸಾಕಷ್ಟು ಶ್ರಮ ಹಾಕಿದ್ದೇವೆ. ಆದರೆ ನಮಗೆ ಸಚಿವ ಸ್ಥಾನದ ಅವಕಾಶವೇ ಸಿಗುತ್ತಿಲ್ಲ.

ನಾವೂ ಕೂಡ ಹಿರಿಯ ಶಾಸಕರಿದ್ದೇವೆ. ಯಾಕೆ ನಮಗೆ ಆ ಅರ್ಹತೆ ಇಲ್ಲವೆ. ಈಗಿನ ಸಚಿವರು ನಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ನಾವೂ ಪತ್ರಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದ್ರೆ ಅವರ ಪಿಎ ಆದವರು ಷರಾ ಬರೆಯುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *