ಗ್ರಾಮೀಣ ಭಾಗದ ರಸ್ತೆಗಳು, ಶಾಲೆಗಳು ಮತ್ತು ಅಂತರ್ಜಲ ಹೆಚ್ಚಿಸುವ ಕಡೆಗೆ ಹೆಚ್ಚಿನ ಗಮನ ನೀಡಿದ್ದೇನೆ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

2 Min Read

 

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜ.11) : ಗ್ರಾಮೀಣ ಭಾಗದ ರಸ್ತೆ ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕೆಲಸಕ್ಕೆ ಹೆಚ್ಚು ಒತ್ತು ನೀಡಲಾಗಿದೆ  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ತಾಲೂಕಿನ ಪ್ರಧಾನ ಮಂತ್ರಿ ಅವರ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ತೋಪುರಮಾಳಿಗೆಯಿಂದ ಎಣ್ಣೆಗೆರೆ ಮುಖ್ಯರಸ್ತೆ  ಕಾಮಗಾರಿಗೆ ಚಾಲನೆ  ನೀಡಿ ಮಾತನಾಡಿದರು.

ತೋಪರಮಾಳಿಗೆ ಯಿಂದ ಎಣ್ಣೆಗೆರೆ ವರೆಗೆ 35 ಲಕ್ಷ  ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಗುಣಮಟ್ಟದಿಂದ ಮಾಡಲು ಸೂಚಿಸಿದ್ದೇನೆ. ಈ ಭಾಗದಲ್ಲಿ  4 ಕೋಟಿ ವೆಚ್ಚದಲ್ಲಿ 4 ಬೃಹತ್ ಚಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ರಸ್ತೆಗಳ ಶಾಲೆಗಳು, ಅಂತರ್ಜಲ ಹೆಚ್ಚಿಸುವ ಕಡೆಗೆ ಹೆಚ್ಚಿನ ಗಮನ ನೀಡಿದ್ದೇನೆ. 75 ಭಾಗ ಹಳ್ಳಿಯಲ್ಲಿ ಸಿ.ಸಿ.ರಸ್ತೆಗಳ ನಿರ್ಮಣ ಮಾಡಲಾಗಿದೆ. ಅಲ್ಪ ಸ್ವಲ್ಪ ಹಳ್ಳಿಯಲ್ಲಿ ಮಾತ್ರ ರಸ್ತೆ ಮಾಡಬೇಕಿದೆ.  ಜನರಿಗೆ ಅಂತರ್ಜಲ ವೃದ್ದಿಯಾದರೆ ಬೊರವೆಲ್ ನಲ್ಲಿ ನೀರಿನ ಮಟ್ಟ ಹೆಚ್ಚಿ ಉತ್ತಮ ಮಳೆ ಬೆಳೆಯಬಹುದು.ಚೆಕ್ ಡ್ಯಾಂಗಳು ಎಲ್ಲಾ ಕಡೆಗಳಲ್ಲಿ ತುಂಬಿದ್ದು  ಸಂತಸ ಉಂಟು ಮಾಡಿದೆ.

ಕ್ಷೇತ್ರದಲ್ಲಿ ಶಾಲೆಗಳು ಅಭಿವೃದ್ಧಿಗೂ ಅನುದಾನ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿವೆ. ಖಾಸಗಿ ಶಾಲೆಗಳಿಗಿಂತ ಅಚ್ಚುಕಟ್ಟಾಗಿ ಕಟ್ಟಡ ನಿರ್ಮಿಸುವ ಮೂಲಕ ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆ ತರುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ  ಲಕ್ಷಾಂತರ ಹಣ ಕಟ್ಟಿ ಖಾಸಗಿ ಶಾಲೆಗೆ ಕಳಿಸುವ ಬದಲು ಉತ್ತಮವಾದ ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಬೇಕು ಎಂಬ ಭಾವನೆಯಲ್ಲಿ ಪೋಷಕರು ಇದ್ದಾರೆ ಎಂದು ತಿಳಿಸಿದರು.

ಕೋವಿಡ್ ಮತ್ತು ಒಮಿಕ್ರಾನ್ ಬಗ್ಗೆ ಇರಲಿ ಎಚ್ಚರ: ಕೋವಿಡ್ ಹೆಚ್ಚುತ್ತಿದ್ದ ತಮ್ಮ ಪ್ರಾಣ ತಮ್ಮ ಕೈಯಲ್ಲಿದೆ.ಯಾರು ಸಹ ಮಾಸ್ಕ್ , ಸ್ಯಾನಿಟೈಸರ್ ಕಡ್ಡಾಯವಾಗಿ  ಬಳಸಿ ಎಂದರು. ಎಲ್ಲಾರಿಗೂ ಸಹ ತನ್ನದೇ ಆದ ಕುಟುಂಬಗಳಿದ್ದು ಎಚ್ಚರಿಕೆ ವಹಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪಿಎಂಜಿಎಸ್ ವೈ ನಾಗರಾಜು, ಗುತ್ತಿಗೆದಾರ ಎಟಿಎಸ್ ತಿಪ್ಪೇಸ್ವಾಮಿ,  ಗ್ರಾಮ ಪಂಚಾಯತಿ ಅಧ್ಯಕ್ಷ ಬೋಸಣ್ಣ, ಸದಸ್ಯರಾದ ಓಬಳೇಶ್,ವೆಂಕಟೇಶ್, ಬಿಜೆಪಿ   ಎಸ್ ಟಿ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್. ಗ್ರಾಮದ ಮುಖಂಡರಾದ ನಾಗೇಂದ್ರ ರೆಡ್ಡಿ, ಸುರೇಶ್ ರೆಡ್ಡಿ, ಶಶಿಧರ ಮಾತು ಸುರೇಶ್ ರಾಜೇಶ್, ಮಾರುತಿ  ಗ್ರಾಮಸ್ಥರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *