ಆ ಒಬ್ಬ ವ್ಯಕ್ತಿ ನನ್ನ ಜೊತೆಗಿಲ್ಲ ಅಂತ ಬೇಸರ ಮಾಡಿಕೊಳ್ಳಲ್ಲ : ಜಶ್ವಂತ್ ಜೊತೆಗಿನ ಬ್ರೇಕಪ್ ಬಗ್ಗೆ ನಂದು ಸ್ಪಷ್ಟನೆ..!

suddionenews
1 Min Read

ಈ ಬಾರಿಯ ಬಿಗ್ ಬಾಸ್ ಒಟಿಟಿ ಹಾಗೂ ಟಿವಿ ಸೀಸನ್ ನಲ್ಲಿ ಲವ್ ಬರ್ಡ್ಸ್ ಆಗಿಯೇ ಇದ್ದ ನಂದು ಮತ್ತು ಜಶ್ವಮನತ್ ನಡುವೆ ಬ್ರೇಕಪ್ ಆಗಿದೆ. ಈ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ನಂದಿನಿಯೇ ಸ್ಪಷ್ಟಪಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಾವಿಬ್ಬರು ಒಟ್ಟಿಗೆ ಇದ್ವಿ, ಜೊತೆಗಿದ್ದು ಇತಿಹಾಸವನ್ನೇ ಸೃಷ್ಟಿಸಿದ್ದೆವು. ಜೊತೆಯಲ್ಲಿದ್ದಾಗ ಖುಷಿಯಿಂದ ಜೀವಿಸಿದ್ದೆವು. ನಾನು ರಿಲೇಷನ್ ಶಿಪ್ ಗೆ ಬರುವಾಗ ಗಿವ್ ಅಪ್ ಮಾಡಬಾರದು ಎಂದುಕೊಂಡಿದ್ದೆ. ಆದರೆ ಸಂಬಂಧ ಅಂತ್ಯಗೊಳಿಸುವಾಗ ಹಾಗೆ ಇರಲಿಲ್ಲ. ಜಶ್ವಂತ್ ನನಗೆ ಸ್ವಲ್ಪ ಸಮಯ ಬೇಕು ಎಂದು ಕೇಳಿದಾಗ, ಅವನ ನಿರ್ಧಾರಕ್ಕೂ ನಾನು ಗೌರವ ಕೊಡಬೇಕಾಗುತ್ತದೆ. ಹಾಗಾಗಿ ನಾನು ಸಮಯ ಕೊಟ್ಟಿದ್ದೀನಿ. ಸದ್ಯಕ್ಕೆ ನಮ್ಮ ಲೈಫ್ ನಲ್ಲಿ ಮೂವ್ ಆನ್ ಆಗಬೇಕು. ನಾನು ಯಾವಗಲೂ ಬಯಸುವುದು ಅವರ ಖುಷಿಯನ್ನು ಅವರೇ ಚೂಸ್ ಮಾಡಬೇಕು ಎಂದು.

ಇಲ್ಲಿ ನನ್ನ ಖುಷಿಯಷ್ಟೇ ಮುಖ್ಯ ಆಗಲ್ಲ. ಅವನಿಗೆ ಅವನ ಖುಚಿ ಏನು ಎಂಬುದನ್ನು ನಿರ್ಧಾರ ಮಾಡಿದ್ದಾನೆ. ಸದ್ಯಕ್ಕೆ ಜಶ್ವಂತ್ ಗೆ ಏನು ಹೇಳಬೇಡಿ. ಸಮಯ ಬಂದಾಗ ಅವನೇ ಪ್ರೂವ್ ಮಾಡುತ್ತಾನೆ. ನನ್ನ ಜೀವನದಲ್ಲಿ ಆ ಒಬ್ಬ ವ್ಯಕ್ತಿ ಇಲ್ಲ ಅಂತ ಬೇಸರ ಮಾಡಿಕೊಳ್ಳಲ್ಲ. ಈಗ ಯಾರಿದ್ದಾರೆ ಅವರಿಗೆ ನಾನು ಆಭಾರಿ ಎಂದು ಪಾಸಿಟಿವ್ ಆಗಿಯೇ ಬರೆದುಕೊಂಡಿದ್ದಾರೆ.

ರೋಡೀಸ್ ನಿಂದ ಜೊತೆಯಲ್ಲಿಯೇ ಇದ್ದವರು, ಶೋ ಮುಗಿದ ಮೇಲೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು. ಬಿಗ್ ಬಾಸ್ ಸೀಸನ್ ಗೆ ಬಂದ ಮೇಲೆ ಸಾನ್ಯಾರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ಇದೀಗ ಬ್ರೇಕಪ್ ಕೂಡ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *