ನೀವು ಮಾಂಸಹಾರ ಇಷ್ಟಪಡಲ್ಲ, ನಿಮ್ಮ ಸಮಸ್ಯೆ ಏನು..? ಗುಜರಾತ್ ಹೈಕೋರ್ಟ್ ತರಾಟೆ..!

ಅಹಮದಾಬಾದ್: ಮಾಂಸಹಾರಕ್ಕೆ ಸಂಬಂಧಿಸಿದಂತೆ ಅಹಮದಬಾದ್ ಮುನ್ಸಿಪಲ್ ಕಾರ್ಪೋರೇಷನ್ ಅನ್ನು ಗುಜರಾತ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನಿಮ್ಮ ಸಮಸ್ಯೆಯಾದರೂ ಏನು ..? ನೀವೂ ಮಾಂಸಾಹಾರ ಇಷ್ಟಪಡಯವುದಿಲ್ಲ ಅದು ನಿಮಗೆ ಸಂಬಂಧಿಸಿದ್ದು ಎಂದು ಕ್ಲಾಸ್ ತೆಗೆದುಕೊಂಡಿದೆ.

ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್ ಗಳಿಂದ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆ ಎಎಂಸಿ ತಮ್ಮ ಗಾಡಿಗಳನ್ನ ವಶಕ್ಕೆ ಪಡೆದಿತ್ತು. ಇದಕ್ಕೆ ಸಂಬಂಧಿದ.‌ತೆ 25 ಜನ ಬೀದ ವ್ಯಾಪಾರಿಗಳು ಕೋರ್ಟ್ ಮೊರೆ ಹೋಗಿದ್ದರು. ಅವರ ಸಮಸ್ಯೆಯನ್ನ ಆಲಿಸಿದ ಹೈಕೋರ್ಟ್ ಎಎಂಸಿ ಗೆ ಪ್ರಶ್ನೆ ಕೇಳಿದೆ. ನಾನು ಹೊರಗೆ ಏನು ತಿನ್ನಬೇಕು ಎಂದು ನೀವೂ ನಿರ್ಧರೊಸಿದರೆ ಹೇಗೆ..? ಹಾಗಾದ್ರೆ ನಾಳೆ ನೀವೂ ಹೊರಗೆ ಏನು ತಿನ್ನಬೇಕು ಅಂತ ಹೇಳುತ್ತೀರಾ..? ಕಬ್ಬಿನ ರಸ ಕುಡಿದರೆ ಸಕ್ಕರೆ ಕಾಯಿಲೆ ಬರುತ್ತದೆ ಎಂದು ಅದನ್ನ ಕುಡಿಬೇಡಿ ಅಂತ ಆಯುಕ್ತರು‌ ಹೇಳುತ್ತಾರೆಯೇ..? ಎಂದು ಹೈಕೋರ್ಟ್ ಪ್ರಶ್ನಿಸಿದೆ.

ಮಾಂಸಾಹಾರ ಮಾರಾಟ ಮಾಡುವ ಗಾಡಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿವೆ ಎಂದು ರಾಜ್‌ಕೋಟ್ ಮೇಯರ್ ಕಳೆದ ತಿಂಗಳು ಹೇಳಿದ್ದರು. ಈ ಹಿನ್ನೆಲೆ ಬೀದಿ ಬದಿ ವ್ಯಾಪಾರಿಗಳ ಗಾಡಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಇದೀಗ ವಶ ಪಡಿಸಿಕೊಂಡಿರುವ ಗಾಡಿಗಳನ್ನು 24 ಗಂಟೆಯೊಳಗೆ ವ್ಯಾಪಾರಿಗಳಿಗೆ ಹಿಂತಿರುಗಿಸುವಂತೆ ಕೋರ್ಟ್ ಆದೇಶ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *