Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೊಸಪೇಟೆ-ಕಂಪ್ಲಿ-ಕುರುಗೋಡು-ಸಿರುಗುಪ್ಪ-ಆದೋನಿ ಮಾರ್ಗದಲ್ಲಿ ವೇಗದೂತ ಬಸ್ ಸಂಚಾರ ಆರಂಭ

Facebook
Twitter
Telegram
WhatsApp

ಬಳ್ಳಾರಿ, (ಸೆ.30): ಬಳ್ಳಾರಿ ವಿಭಾಗದ ಕುರುಗೋಡು ಘಟಕದಿಂದ ನೂತನವಾಗಿ ಹೊಸಪೇಟೆ-ಕಂಪ್ಲಿ-ಕುರುಗೋಡು-ಸಿರುಗುಪ್ಪ-ಆದೋನಿ ಮಾರ್ಗದಲ್ಲಿ ಅ.1ರಿಂದ ಎರಡು ವೇಗದೂತ ವಾಹನಗಳ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬಾನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊಸಪೇಟೆ-ಕಂಪ್ಲಿ- ಕುರುಗೋಡು-ಸಿರುಗುಪ್ಪ- ಆದೋನಿ ಮಾರ್ಗದಲ್ಲಿ ಹೊಸಪೇಟೆಯಿಂದ ಒಂದು ವಾಹನ ಬೆಳಗ್ಗೆ 06.30ಕ್ಕೆ ಮತ್ತೊಂದು ವಾಹನ  ಬೆಳಗ್ಗೆ 9ಕ್ಕೆ ಬಿಡಲಾಗುವುದು. ಒಂದು ವಾಹನ ಬೆಳಗ್ಗೆ 11ಕ್ಕೆ ಮತ್ತೊಂದು ವಾಹನ 1.30ಕ್ಕೆ ಆದೋನಿ ತಲುಪಲಿದೆ.

ಆದೋನಿ-ಸಿರುಗುಪ್ಪ-ಕುರುಗೋಡು-ಕಂಪ್ಲಿ-ಹೊಸಪೇಟೆ ಮಾರ್ಗವಾಗಿ ಆದೋನಿಯಿಂದ ಒಂದು ವಾಹನ 11.30ಕ್ಕೆ ಮತ್ತೊಂದು ವಾಹನ ಮಧ್ಯಾಹ್ನ 2ಕ್ಕೆ ಬಿಡಲಾಗುತ್ತದೆ. ಒಂದು ವಾಹನ ಸಂಜೆ 4ಕ್ಕೆ ಮತ್ತೊಂದು ವಾಹನ ಸಂಜೆ 6.30ಕ್ಕೆ ಹೊಸಪೇಟೆ ತಲುಪಲಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಶೇಷ ಸೌಲಭ್ಯವನ್ನು ಎಲ್ಲಾ ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Watermelon vs Muskmelon : ಕಲ್ಲಂಗಡಿ vs ಕರ್ಬೂಜ |  ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ?

  ಸುದ್ದಿಒನ್ : ಕಲ್ಲಂಗಡಿ ಮತ್ತು ಕರ್ಬೂಜ ಎರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯವಾದ ಹಣ್ಣುಗಳಾಗಿವೆ.  ಎರಡನ್ನೂ ಇಷ್ಟಪಡುವ ಅನೇಕ ಜನರಿದ್ದಾರೆ. ಆದರೆ ಈಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು. ಅದರ ಬಗ್ಗೆ ತಿಳಿದುಕೊಳ್ಳೋಣ. ಕಲ್ಲಂಗಡಿ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ

ಈ ರಾಶಿಯ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಧನ ಲಾಭ, ಈ ಪಂಚ ರಾಶಿಗಳಿಗೆ ಆಕಸ್ಮಿಕ ಧನ ಲಾಭ ಪ್ರಾಪ್ತಿ,   ಗುರುವಾರ ರಾಶಿ ಭವಿಷ್ಯ ಏಪ್ರಿಲ್-25,2024 ಸೂರ್ಯೋದಯ: 05:57, ಸೂರ್ಯಾಸ್ತ : 06:30 ಶಾಲಿವಾಹನ

ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ, ಹಿರಿಯೂರಲ್ಲಿ ಬಿ.ಎನ್.ಚಂದ್ರಪ್ಪ ಬಣ್ಣನೆ

ಸುದ್ದಿಒನ್, ಚಿತ್ರದುರ್ಗ, ಏ. 24 :  ಮುಖ್ಯಮಂತ್ರಿ ಸ್ಥಾನವನ್ನು ಸುಲಭವಾಗಿ ಅಲಂಕರಿಸುವ ಬಂದಿದ್ದ ಅವಕಾಶವನ್ನು ನಿರಾಕರಿಸಿ, ಕನ್ನಡ ನಾಡು-ನುಡಿಗೆ ಬದುಕು ಮಿಸಲಿಟ್ಟ ಡಾ.ರಾಜಕುಮಾರ್ ಅವರಿಗೆ ಅವರೇ ಸಾಟಿ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಬಣ್ಣಿಸಿದರು.

error: Content is protected !!