ಹೊಸದುರ್ಗ ಪೊಲೀಸರ ಕಾರ್ಯಾಚರಣೆ : ಇಬ್ಬರು ಅಂತರ್ ಜಿಲ್ಲಾ ಸರಗಳ್ಳರ ಬಂಧನ : 9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸುದ್ದಿಒನ್, ಹೊಸದುರ್ಗ, ಮಾರ್ಚ್. 16 : ತಾಲ್ಲೂಕಿನ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಸರಗಳ್ಳರು ಕೊನೆಗೂ ಪೊಲೀಸರ ಖೆಡ್ಡಾಗೆ ಬಿದ್ದಿದ್ದಾರೆ. ಹೊಸದುರ್ಗ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಮನೆ ಹಾಗೂ ಸರಗಳ್ಳರನ್ನು ಬಂಧಿಸಿ, ಬಂಧಿತರಿಂದ ಸುಮಾರು 8,90,000-00 ರೂ ಬೆಲೆಬಾಳುವ 125 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು 1,00,000-00 ರೂ ಬೆಲೆಬಾಳುವ 01 ಮೋಟಾರ್ ಸೈಕಲ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರ‌ನ್ನು ಭದ್ರಾವತಿ ತಾಲ್ಲೂಕಿನ ಗಂಗೂರು ಗ್ರಾಮದ ಸಂತೋಷ (46 ವರ್ಷ) ಮತ್ತು ಶಿವಮೊಗ್ಗ ತಾಲ್ಲೂಕಿನ ಗಾಜನೂರು ಹೊಸಳ್ಳಿ ಗ್ರಾಮದ ಹೊನ್ನಕುಮಾರ (36 ವರ್ಷ)
ಎಂದು ಗುರುತಿಸಲಾಗಿದೆ. ಇವರು ಹೊಸದುರ್ಗ ಪೊಲೀಸ್ ಠಾಣೆಯ 03 ಸರಗಳ್ಳತನ ಪ್ರಕರಣ ಹಾಗೂ ಒಂದು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಈ ಪ್ರಕರಣವನ್ನು ಬೇಧಿಸಲು
ಎ.ಎಸ್.ಪಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ, ಹಿರಿಯೂರು ಉಪವಿಭಾಗದ ಡಿ.ವೈ.ಎಸ್.ಪಿ. ಟಿ.ಎಂ.ಶಿವಕುಮಾರ್, ಪಿ.ಐ.ಎನ್.ತಿಮ್ಮಣ್ಣನವರ ನೇತೃತ್ವದಲ್ಲಿ ಭೀಮನಗೌಡ ಪಾಟೀಲ್ ಪಿ.ಎಸ್.ಐ, ಮಹೇಶ್ ಕುಮಾರ್ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಸತ್ಯನಾರಾಯಣ ಹೆಚ್.ಸಿ, ಕುಮಾರ ಹೆಚ್.ಸಿ, ಗಂಗಾಧರ ಪಿಸಿ, ರಾಜಣ್ಣ ಪಿಸಿ, ಚಾಲಕರಾದ ನಟರಾಜ್, ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ.ಎ.ಎಸ್.ಐ ಹಾಗೂ ಸಿಬ್ಬಂದಿಯವರ ತಂಡದವರ ಈ ಕಾರ್ಯಾಚರಣೆಯನ್ನು ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿರುತ್ತಾರೆ.

suddionenews

Recent Posts

ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ

ಈ ರಾಶಿಯವರಿಗೆ ಕೊನೆ ಘಳಿಗೆಯಲ್ಲಿ ಪ್ರಮೋಷನ್ ಭಾಗ್ಯ, ಈ ರಾಶಿಯವರಿಗೆ ಆದಾಯ ಕುಂಠಿತ, ಸೋಮವಾರದ ರಾಶಿ ಭವಿಷ್ಯ 17 ಮಾರ್ಚ್…

51 minutes ago

ಅದ್ದೂರಿಯಾಗಿ ನೆರವೇರಿದ ಅಂಬಿ‌ ಮೊಮ್ಮಗನ ನಾಮಕರಣ ; ತಾತನ ಹೆಸರು, ಗಣ್ಯರ ಹಾರೈಕೆ, ಯಾರೆಲ್ಲಾ ಬಂದಿದ್ರು..?

ಬೆಂಗಳೂರು; ರೆಬಲ್ ಸ್ಟಾರ್ ಅಂಬರೀಶ್ ಪುತ್ರನ ನಾಮಕರಣ ಇಂದು ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಖಾಸಗಿ ಹೊಟೇಲ್ ನೆರವೇರಿದ್ದು, ಮೊಮ್ಮಗನಿಗೆ ತಾತನ…

10 hours ago

ನಮ್ಮದು ಸಾಮರಸ್ಯವನ್ನು ಎತ್ತಿಹಿಡಿಯುವ ಶಾಂತಿಪ್ರಿಯ ದೇಶ : ಲೆಕ್ಸ್ ಫ್ರೀಡ್ಮನ್ ಜೊತೆ ಪ್ರಧಾನಿ ಮೋದಿ ಪಾಡ್‌ಕ್ಯಾಸ್ಟ್

ಸುದ್ದಿಒನ್ : ಪ್ರಧಾನಿ ಮೋದಿ ಮತ್ತು AI ಸಂಶೋಧಕ ಲೆಕ್ಸ್ ಫ್ರೀಡ್ಮನ್ ನಡುವೆ ಆಸಕ್ತಿದಾಯಕ ಪಾಡ್‌ಕ್ಯಾಸ್ಟ್ ನಡೆಯಿತು. ಸ್ವಲ್ಪ ಸಮಯದ…

11 hours ago

ಕುಡಿಯುವ ನೀರಿಗಾಗಿ ಜಗಳ : ಮುರಿದು ಬಿದ್ದ ಮದುವೆ

ಸುದ್ದಿಒನ್, ಹಿರಿಯೂರು, ಮಾರ್ಚ್. 16  : ಆರತಕ್ಷತೆಯ ನಂತರ ಏರ್ಪಡಿಸಿದ್ದ ಭೋಜನದಲ್ಲಿ ಕೊನೆಗೆ ಬಂದ ಕೆಲವರಿಗೆ ಕುಡಿಯುವ ನೀರು ಸಿಗಲಿಲ್ಲ…

11 hours ago

ಸುನೀತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ಎದುರಾಗಲಿವೆ ಈ ಆರೋಗ್ಯ ಸಮಸ್ಯೆ..!

    ಬೆಂಗಳೂರು; ಕಡೆಗೂ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ಸಮಯ ಹತ್ತಿರವಾಗಿದೆ. ಆದರೆ ಕಳೆದ…

12 hours ago

ನಾಯಕನಹಟ್ಟಿ ಜಾತ್ರೆ : ಬಾರಿ ಮೊತ್ತಕ್ಕೆ ಹರಾಜಾದ ಮುಕ್ತಿ ಬಾವುಟ

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 16 : ಮಧ್ಯ ಕರ್ನಾಟಕದ ಪವಾಡ ಪುರುಷ, ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಅದ್ದೂರಿಯಾಗಿ…

12 hours ago