ವಿದ್ಯಾರ್ಥಿಗಳು ಟೆರರಿಸ್ಟ್ ಅಂತ ರಜೆ ಕೊಟ್ಟಿದ್ದಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

suddionenews
1 Min Read

 

ಬೆಂಗಳೂರು: ಮೋದಿ ಬಂದಾಗ ಬೆಂಗಳೂರಿನಲ್ಲಿ ಶಾಲಾ‌ಕಾಲೇಜುಗಳಿಗೆ ರಜೆ ಕೊಟ್ಟಿದ್ದಕ್ಕೆ ಡಿಕೆಶಿ ಟೀಕೆ ಮಾಡಿದ್ದರು. ವಿದ್ಯಾರ್ಥಿಗಳೇನು ಟೆರರಿಸ್ಟ್ ಗಳಾ ಎಂದು ಕಿಡಿಕಾರಿದ್ದರು. ಈ ಬಗ್ಗೆ ಇಂದು ಆರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ. ಮೋದಿ ಜಗತ್ತಿನ ನಾಯಕ. ಮೋದಿ ಬಂದಾಗ ಎಲ್ಲಾ ರೀತಿಯ ಭದ್ರತೆ ಕೊಡುವುದು ಅವಶ್ಯಕತೆ ಇದೆ.

ವಿದ್ಯಾರ್ಥಿಗಳು ಟೆರರಿಸ್ಟ್ ಅಂತ ಯಾರು ಹೇಳಿದ್ದು?. ಡಿಕೆಶಿಯವ್ರು ಮಾತ್ರ ಅವರ ಬಾಯಲ್ಲಿ ಹೇಳಬಹುದು. ವಿದ್ಯಾರ್ಥಿಗಳ‌ ಓಡಾಟಕ್ಕೆ ತೊಂದರೆ ಆಗುತ್ತೆ, ಅವರ ಸಂಚಾರಕ್ಕೆ ತೊಂದರೆ ಆಗುತ್ತೆ ಅಂತ ರಜೆ ಕೊಟ್ಟಿದ್ದಾರೆ. ಈ ಕಾರಣಕ್ಕೆ ರಜೆ ಕೊಟ್ಟಿದ್ದಾರೆ ಹೊರತು ವಿದ್ಯಾರ್ಥಿಗಳು ಟೆರರಿಸ್ಟ್ ಗಳು ಅನ್ನೋ ಕಾರಣಕ್ಕಲ್ಲ

ಈ ನೆಲದ ಕಾನೂನಿನ ಮೇಲೆ ಕಾಂಗ್ರೆಸ್ ಗೆ ಗೌರವ ಇಲ್ಲ. ಮೋದಿಯವರ ನೇತೃತ್ವ ಇದ್ದಿದ್ದರಿಂದಲೇ ಕೋವಿಡ್ ಸಂದರ್ಭದಲ್ಲಿ ಈ ದೇಶ ಬದುಕಿ ಬಚಾವಾಗಿದೆ. ಇದನ್ನು ಇಡೀ ವಿಶ್ವ ಕೊಂಡಾಡ್ತಿದೆ. ಸಿದ್ದರಾಮಯ್ಯ ಏನು ಬೇಕಾದರೂ ಹೇಳಬಹುದು. ಸಾಕಷ್ಟು ಹಣ ಕೊಟ್ಟು ಎರಡು ವರ್ಷ ಉಚಿತವಾಗಿ, ವ್ಯಾಕ್ಸಿನ್ ಕೊಟ್ಟಿದ್ದಾರೆ. ಜಗತ್ತಿನಲ್ಲಿ ಹೆಚ್ಚು ವ್ಯಾಕ್ಸಿನ್ ಕೊಟ್ಟಿರೋ ದೇಶ ನಮ್ದು. ಇದೆಲ್ಲವನ್ನೂ ಮರೆತು ಸಿದ್ದರಾಮಯ್ಯ ಟೀಕೆಗಾಗಿ ಟೀಕೆ ಮಾಡ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಬಗ್ಗೆ ಬಿಟ್ಟು ಉಳಿದವರೆಲ್ಲರ ಬಗ್ಗೆಯೂ ಮಾತಾಡ್ತಾರೆ. ಬಹಳ ಅಸಡ್ಡೆಯಿಂದ ಮಾತಾಡ್ತಾರೆ ಸಿದ್ದರಾಮಯ್ಯ. ಕೀಳು ಅಭಿರುಚಿಯ ರಾಜಕಾರಣಿ ಅವರು ಎಂದು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *