ಗಾಂಧೀಜಿ ಇನ್ನಿಲ್ಲ ಎಂದೇ ಹಿಂದುತ್ವವಾದಿಗಳು ಭಾವಿಸಿದ್ದಾರೆ : ರಾಹುಲ್ ಗಾಂಧಿ

suddionenews
1 Min Read

ನವದೆಹಲಿ: ಇಂದು ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ. ಅವರ ಹೋರಾಟಗಳನ್ನೆಲ್ಲ ಸ್ಮರಿಸಿ, ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಇದೇ ವೇಳೆ ರಾಹುಲ್ ಗಾಂಧಿಯವರು ಕೂಡ ಗಾಂಧೀಜಿಯವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಇಂದಿನ ದಿನವನ್ನ ಟ್ವೀಟ್ ಮಾಡುವ ಮೂಲಕ ನೆನೆದಿದ್ದಾರೆ. ಹಿಂದುತ್ವವಾದಿಗಳ ವಿರುದ್ಧ ಕಿಡಿಕಾರಿದ್ದಾರೆ. ಹಿಂದುತ್ವವಾದಿಗಳು ಗಾಂಧೀಜಿಯವರು ಇಲ್ಲ ಎಂದೇ ಭಾವಿಸಿದ್ದಾರೆ. ಆದ್ರೆ ಸತ್ಯ ಎಲ್ಲಿ ಇರುತ್ತದೆಯೋ ಅಲ್ಲಿ ಗಾಂಧೀಜಿ ಇರುತ್ತಾರೆ ಎಂದಿದ್ದಾರೆ.

ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ. ನಾನು ಹತಾಶಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಗೆದ್ದಿದೆ. ಕೊಲೆಗಾರರು ಇಲ್ಲಿದ್ದಾರೆ. ಅವರೆಲ್ಲ ಕೆಲ ಕಾಲವಷ್ಟೇ ಅಜೇಯರಾಗಿ ಕಾಣಬಹುದು. ಆದ್ರೆ ಕೊನೆಯಲ್ಲಿ ಅವರು ಬೀಳಲೇಬೇಕು. ಸತ್ಯವೇ ಗೆಲ್ಲುತ್ತದೆ ಎಂದು ಟ್ವೀಟ್ ಮಾಡಿ, ಗಾಂಧೀಜಿಯವರನ್ನ ಸ್ಮರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *