ಹಿಜಾಬ್ ವಿವಾದ : ಶಾಸಕ ಯು ಟಿ ಖಾದರ್ ಬಗ್ಗೆ ಅಸಮಾಧಾನ ಹೊರ ಹಾಕಿದ ಗೌಸಿಯಾ..!

suddionenews
1 Min Read

ಮಂಗಳೂರು: ಪರೀಕ್ಷೆ, ಫಲಿತಾಂಶ ಅಂತ ತಣ್ಣಗಾಗಿದ್ದ ಹಿಜಾಬ್ ಗಲಾಟೆ ಮಂಗಳೂರಿನಲ್ಲಿ ಮತ್ತೆ ಆರಂಭವಾಗಿದೆ. ಈ ಸಂಬಂಧ ಹಿಜಾಬ್ ಧರಿಸಿಯೇ ಕಾಲೇಜಿಗೆ ಹೋಗುತ್ತೇವೆಂದ ವಿದ್ಯಾರ್ಥಿನಿಯರು ಬೆಂಬಲಕ್ಕಾಗಿ ಶಾಸಕ ಯುಟಿ ಖಾದರ್ ಭೇಟಿಗೆ ತೆರಳಿದ್ದಾರೆ. ಆದರೆ ಈ ಸಂಬಂಧ ಗೌಸಿಯಾ ಅಸಮಾಧಾನ ಹೊರ ಹಾಕಿದ್ದಾರೆ.

ಈ ಬಗ್ಗೆ ಮಾಧ್ಯನದವರೊಂದಿಗೆ ಮಾತನಾಡಿದ ಗೌಸಿರ್, ನಾವೂ ಶಾಸಕ ಯು ಟಿ ಖಾದರ್ ಅವರನ್ನು ಭೇಟಿ ಮಾಡಿದ್ದೇವೆ. ಆದರೆ ಅವರಿಂದ ಸರಿಯಾದ ರೀತಿ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರು ಅಡ್ಯಾರ್ ಗೆ ಹೋಗಿ ಕ್ರಿಕೆಟ್ ಆಡುತ್ತಿದ್ದಾರೆ. ಧಾರ್ಮಿಕ ಪಂಡಿತರು, ವಿದ್ಯಾರ್ಥಿ ಸಂಘಟನೆ, ಸ್ತ್ರಿಪರವಾಗಿರುವ ಯಾರೇ ಆಗಲಿ ಈ ಸಮಸ್ಯೆಗೆ ಪರಿಹಾರ ನೀಡುವುದಾದರೆ ನಾವೂ ಅವರ ಜೊತೆ ನಿಲ್ಲುತ್ತೇವೆ ಎಂದಿದ್ದಾರೆ.

ಇನ್ನು ಕಾನೂನು ರೀತಿಯಲ್ಲಿಯೇ ಹೋಗಬಹುದು. ಆದರೆ ಅದು ಬಹಳ ಸಮಯ ಬೇಕಾಗುತ್ತದೆ. ಈಗಾಗಲೇ ನಮ್ಮ ಹಾಜರಾತಿ ಬಹಳಷ್ಟು ಕಡಿಮೆ ಇದೆ. ಇನ್ನು ಕಡಿಮೆಯಾದರೆ ಪರೀಕ್ಷೆಗೆ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *