ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತಡೆಹಿಡಿದ ಹೈಕಮಾಂಡ್: ಸುಧಾಕರ್ ಗೆ ಸವಾಲು ಹಾಕಿದ ಸಂದೀಪ್ ರೆಡ್ಡಿ

ಚಿಕ್ಕಬಳ್ಳಾಪುರ: ಬಿಜೆಪಿ ಎಲ್ಲಾ ಜಿಲ್ಲೆಗಳಿಗೂ ಜಿಲ್ಲಾಧ್ಯಕ್ಷರನ್ನ ನೇಮಕ ಮಾಡಿದೆ. ಚಿಕ್ಕಬಳ್ಳಾಪುರಕ್ಕೂ ಸಂದೀಪ್ ರೆಡ್ಡಿಯನ್ನು ನೇಮಕ ಮಾಡುವುದರಲ್ಲಿತ್ತು. ಆದರೆ ಡಾ.ಕೆ.ಸುಧಾಕರ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಹೈಕಮಾಂಡ್ ತಡೆಹಿಡಿದಿದೆ. ಈ ಸಂಬಂಧ ಇದೀಗ ಸಂದೀಪ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸವಾಲು ಹಾಕಿದ್ದಾರೆ.

ಸಂಸದರಾದ ಸುಧಾಕರ್ ಅವರು ನನ್ನ ವಿರುದ್ಧ ಪರ್ಸನಲ್ ಆಗಿ ಏನೇನು ಟಾರ್ಗೆಟ್ ಮಾಡ್ತಾ ಇದ್ರು ಎಂಬುದನ್ನು ಕಳೆದ ಹತ್ತನ್ನೆರಡು ವರ್ಷದಿಂದ ಜೀರ್ಣ ಮಾಡ್ಕೊಂಡೆ ಬಂದೆ. ಇವತ್ತು ಇದಕ್ಕೊಂದು ಫುಲ್ ಸ್ಟಾಪ್ ಇಡಬೇಕು, ನನ್ನ ಕಾರ್ಯಾಚರಣೆಯನ್ನು ಬೇರೆ ಮಾಡಿಕೊಳ್ಳಬೇಕು ಅಂತ ಮನಸ್ಸಲ್ಲಿ ನಿರ್ಧಾರ ಮಾಡಿದ್ದೀನಿ, ಅದರಂತೆ ನಡೆಯುತ್ತೀನಿ. 2007ರಲ್ಲಿ ನಾನು ಮತ್ತು ಸುಧಾಕರ್ ಅವರು ಕಾಂಗ್ರೆಸ್ ನಲ್ಲಿದ್ವಿ. ಇದೇ ಸುಧಾಕರ್ ಅವರು 2007-08ರಲ್ಲಿ ಕೆಪಿಸಿಸಿಗೆ ಸೆಕ್ರೆಟರಿ ಆಗಿದ್ದರು. ಆ ಸಮಯದಲ್ಲಿ ಪಕ್ಷದ ಟಿಕೆಟ್ ಗೋಸ್ಕರ ಕಷ್ಟಪಟ್ಟಿದ್ದು ನಿಜ. ನಮ್ಮ ತಾಯಿಗೆ ಅಂದು ಜಿಲ್ಲಾ ಪಂಚಾಯತ್ ಗೆ ಟಿಕೆಟ್ ತೆಗೆದುಕೊಂಡು ಬಂದೆ. ನಮ್ಮ ತಾಯಿ ಇಂದಿಗೂ ಆತನನ್ನ ಮಗ ಅಂತಾರೆ. ಆದ್ರೆ ಈ ಮನುಷ್ಯ ತನ್ನ ತಾಯಿಯನ್ನೇ ಸೋಲಿಸಬೇಕು ಅಂತೇಳಿ ಅಂದಿನಿಂದ ರೆಬೆಲ್ ಆದ್ರು.

ಆದ್ರೂ ನಾವೂ ಅವರನ್ನ ಬಿಟ್ವಾ..? 2013ರಲ್ಲಿ ನಾನು ನಿಮ್ಮ ಪರ ಕೆಲಸ ಮಾಡದೆ ಇರಬಹುದು. ಆದರೆ ತೊಂದರೆಯಂತು ಕೊಟ್ಟಿಲ್ಲ. 2019ಕ್ಕೆ ತಾವೂ ನಮ್ಮ ಪಕ್ಷಕ್ಕೆ ಬಂದ್ರಿ (ಬಿಜೆಪಿ). ಆಗ ನೀವೂ ನನಗೆ ಕಳಿಸಿರುವ ಮೆಸೇಜಸ್, ನಾನು ನೀವೂ ಮಾಡಿರುವಂಥ ಕೆಲಸ, ನನ್ನ ತನು, ಮನ, ಧನವನ್ನೆಲ್ಲ ಅರ್ಪಿಸಿಕೊಂಡಿದ್ದೀನಿ. ನನ್ನನ್ನ ನಮ್ಮ ಹೋಬಳಿಗೆ ಇನ್ಚಾರ್ಜ್ ಮಾಡಿ ಹಾಕುದ್ರು. ಆದರೆ ನಾನು ಆ ಸಮಯದಲ್ಲಿ ನಾನು ಹೆಚ್ಚಿನ ಕೆಲಸ ಮಾಡಿದ್ದೀನಿ. 2024ರಲ್ಲಿ ನೀವೂ ಲೋಕಸಭಾ ಚುನಾವಣೆಯಲ್ಲಿ ನೀವೂ ಟಿಕೆಟ್ ಕೇಳಿದ್ರಿ, ನಾವೂ ವಿಶ್ವಣ್ಣನ ಮಗನಿಗೆ ಟಿಕೆಟ್ ಗಾಗಿ ಪ್ರಯತ್ನ ಪಟ್ಟಿದ್ದು ನಿಜ. ಅದನ್ನ ತಪ್ಪು ಅಂತ ಹೇಗೆ ಹೇಳಿದ್ರಿ. ಆಯ್ತು ಟಿಕೆಟ್ ನಿಮಗೆ ಸಿಕ್ಕ ಮೇಲೆ ನಿಮಗೋಸ್ಕರ ಕೆಲಸ ಮಾಡಿದ್ದೀನೋ ಇಲ್ವೋ ಅನ್ನೋದನ್ನ ಆಣೆ ಮಾಡಿ ಹೇಳಿ ಎಂದು ಸವಾಲು ಹಾಕಿದ್ದಾರೆ.

suddionenews

Recent Posts

ತಂತ್ರಜ್ಞಾನ ಆಧಾರಿತ ಭೋದನಾ ಸಾಧನಗಳನ್ನು ಅಳವಡಿಸಿಕೊಳ್ಳಿ : ಎನ್.ಆರ್. ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಶ್ರೀಧರ್, ತುರುವನೂರು ಮೊ: 78997 89545 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 :…

3 hours ago

AI ತಂತ್ರಜ್ಞಾನಗಳಿಂದ ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ : ಪ್ರಧಾನಿ ಮೋದಿ

ಸುದ್ದಿಒನ್ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ AI ಕ್ರಿಯಾ ಶೃಂಗಸಭೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ…

6 hours ago

ಸರ್ಕಾರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ: ಶಾಸಕ ಎಸ್.ಆರ್.ಶ್ರೀನಿವಾಸ್

  ಗುಬ್ಬಿ: ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಎಂಬ ಸಲ್ಲದ ಆರೋಪ ಮಾಡುವ ವಿರೋಧಪಕ್ಷ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ…

6 hours ago

ವೀಲ್ ಚೇರ್ ನಲ್ಲಿ ಬಂದ ಸಿಎಂ: ಸಿದ್ದರಾಮಯ್ಯ ಅವರ ಆರೋಗ್ಯ ಈಗ ಹೇಗಿದೆ..?

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಎಡಗಾಲಿನ ಮಂಡಿನೋವು ಕಾಣಿಸಿಕೊಂಡ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಒಂದೆರಡು…

6 hours ago

ಗ್ಯಾರಂಟಿ ಯೋಜನೆಗಳ ಜಾಗೃತಿ ವಾಹನಕ್ಕೆ ಚಾಲನೆ

    ಚಿತ್ರದುರ್ಗ. ಫೆ.11: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಾಗೃತಿ ಮೂಡಿಸುವ ಎಲ್‍ಇಡಿ ವಾಹನಕ್ಕೆ ಜಿಲ್ಲಾ ಗ್ಯಾರಂಟಿ…

6 hours ago

ಸೈಬರ್ ಮೋಸದ ಜಾಲಕ್ಕೆ ಸಿಲುಕಬೇಡಿ : ಜಿಪಂ ಸಿಇಒ ಸೋಮಶೇಖರ್

    ಚಿತ್ರದುರ್ಗ. ಫೆ.11: ದೇಶದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅಂತರ್ಜಾಲದಲ್ಲಿ ವಂಚನೆ ಮಾಡುವವರು ಕೂಡ ಹೆಚ್ಚಾಗುತ್ತಿದ್ದು, ಹೀಗಾಗಿ ಎಚ್ಚರ…

6 hours ago