ನಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆ ಅನೇಕ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯಕರ ಚರ್ಮ, ಕೂದಲು, ಜೀವಕೋಶಗಳು ಮತ್ತು ಇತರೆ ಆರೋಗ್ಯಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆಯಾಸವನ್ನು ನಿವಾರಿಸಲು ದೇಹದಲ್ಲಿ ಕಬ್ಬಿಣಾಂಶ ಅತ್ಯವಶ್ಯಕ. ಇದರ ಕೊರತೆಯಿಂದಾಗಿ ಉಸಿರಾಟದ ತೊಂದರೆ, ದೌರ್ಬಲ್ಯ, ತಲೆನೋವು, ತಲೆತಿರುಗುವಿಕೆ, ಹಸಿವು ಕಡಿಮೆಯಾಗುವುದು ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.
* ಕರಿಬೇವಿನಲ್ಲಿ ಕಬ್ಬಿಣ ಅಂಶ ಇದೆ. ಹೀಗಾಗಿ ಕರಿಬೇವನ್ನ ಹೆಚ್ಚಾಗಿ ಬಳಸುವಿದರಿಂದ ದೇಹಕ್ಕೆ ಕಬ್ಬಿಣದಂಶ ಸಿಗಲಿದೆ.
* ಪ್ರತಿದಿನ ಬೆಲ್ಲ ತಿನ್ನುವುದರಿಂದ ಹಿಮೊಗ್ಲೊಬಿನ್ ಮತ್ತು ಕಬ್ಬಿಣಾಂಶ ಸಿಗುತ್ತೆ.
* ನುಗ್ಗೆ ಸೊಪ್ಪು, ಬಾಳೆ ಕಾಯಿ, ಸೇಬು, ಬದನೆಕಾಯಿಯಂತಹ ತರಕಾರಿಗಳಲ್ಲಿ ಹೇರಳ ಐರನ್ ಇರುತ್ತೆ.
* ಬೀಟ್ರೂಟ್ ಜ್ಯೂಸ್, ದಾಳಿಂಬೆ, ಖರ್ಜೂರ, ಕರಿಬೇವಿನ ಸೊಪ್ಪನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು ರಸ ಸೇವಿಸಬೇಕು. ಎಲ್ಲಾ ತರಹದ ಹಸಿರು ಸೊಪ್ಪು ಸೇವಿಸಿರಿ. ರಾಗಿ ಗಂಜಿಗೆ ನಾತಿಬೆಲ್ಲ ಹಾಕಿ ಕುಡಿಯಿರಿ.
* ಪಾಲಾಕ್ ಸೊಪ್ಪು, ಗಣಿಕೆ ಸೊಪ್ಪು, ಬಾಳೆಕಾಯಿ ಸಾಂಬಾರ್ ಮಾಡಿ ತಿನ್ನಿರಿ.
* ಹಸಿರು ಸೊಪ್ಪು ಹಾಗೂ ಮೈಸೂರು ಬದನೆ ಹೆಚ್ಚು ಉಪಯೋಗಿಸಿ.
* 10 ರಿಂದ 15 ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಚೆನ್ನಾಗಿ ಕಿವುಚಿ ಬರಿ ಹೊಟ್ಟೆಯಲ್ಲಿ ಸೇವಿಸಬೇಕು. ಕನಿಷ್ಠ 15 ದಿನ ಸೇವಿಸಬೇಕು.
* ರಾತ್ರಿ ಮಲಗುವ ವೇಳೆ 1 ಲೋಟ ಕಾಯಿಸಿ ಆರಿಸಿದ ಹಸುವಿನ ಹಾಲಿಗೆ ಒಳ್ಳೆಯ ಜೇನು ತುಪ್ಪವನ್ನು ಬೆರೆಸಿ ಕುಡಿಯಬೇಕು.
* ಬೆಳಿಗ್ಗೆ ತಿಂಡಿಗೆ ಮೊದಲು 1 ಲೋಟ ಬೀಟ್ ರೂಟ್ ಜ್ಯೂಸ್ ಬಹಳ ಒಳ್ಳೆಯ ಪರಿಹಾರ.
* ಆಗಾಗ ಪಾಲಕ್ ಸೊಪ್ಪಿನ ಸೇವನೆ ಬಹಳ ಉಪಯೋಗ.
* ನುಗ್ಗೆ ಸೊಪ್ಪಿನ ಸೇವನೆ ಬಹಳ ಉಪಯೋಗ ನಿಮ್ಮ ಸಮಸ್ಯೆಗೆ.
ಸುದ್ದಿಒನ್ : ಒಣದ್ರಾಕ್ಷಿ ಅನೇಕ ಪೋಷಕಾಂಶಗಳನ್ನು ಮತ್ತು ಔಷಧೀಯ ಗುಣಗಳನ್ನು ಹೊಂದಿವೆ. ಅವುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.…
ಈ ರಾಶಿಯವರ ಮಧ್ಯವರ್ತಿಗಳ ಆದಾಯ ಚೇತರಿಕೆ, ಈ ರಾಶಿಯ ನವದಂಪತಿಗಳು ಹೊಂದಿಕೊಳ್ಳುವುದೇ ಕಷ್ಟ, ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025…
ಬೀದರ್,(ಏಪ್ರಿಲ್ 16): ಗ್ಯಾರಂಟಿಗಳನ್ನು ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಏ. 16 : ಹೊಳಲ್ಕೆರೆ…
ಚಿತ್ರದುರ್ಗ. ಏ.16: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ…
ಚಿತ್ರದುರ್ಗ. ಏ.16: ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ಹಜ್ ಸಮಿತಿ ಸಹಯೋಗದೊಂದಿಗೆ ಬುಧವಾರ ನಗರದ ಎಂ.ಕೆ.ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲೆಯ 99…