ಅವರು ಬರೀ ಬಿಜೆಪಿ ಅಲ್ಲ ಇಡೀ ದೇಶದ ಪ್ರಧಾನಿ : ಪ್ರಿಯಾಂಕ ಗಾಂಧಿ

ನವದೆಹಲಿ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪವಾಗಿದ್ದರ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಿನ ಲೋಪದೋಷದ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದಿದ್ದಾರೆ.

ಪ್ರಧಾನಿ ಮೋದಿಯವರಿಗೆ ಪಂಜಾಬ್ ಸರ್ಕಾರದಿಂದ ಸರಿಯಾದ ಭದ್ರತೆ ನೀಡದೆ ಇದ್ದ ಕಾರಣ ಬಿಜೆಪಿ ಸೇರಿದಂತೆ ಹಲವರು ಅಸಮಾಧಾನ ಹೊರ ಹಾಕಿದ್ರು ಈ ಸಂಬಂಧ ಪ್ರಿಯಾಂಕ ಗಾಂಧಿ ಮಾತನಾಡಿದ್ದು, ಪಂಜಾಬ್ ನಲ್ಲಿ ಕಾಂಗ್ರೆಸ್ ಸರ್ಕಾರವಿದೆ‌. ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ ದೋಷ ಕಂಡು ಬಂದಿದೆ ಎಂಬುದನ್ನು ಮಾಧ್ಯಮದಲ್ಲಿ ನೋಡಿ ಕೂಡಲೇ ಪಂಜಾಬ್ ಸಿಎಂ ಗೆ ಕರೆ ಮಾಡಿ, ಎಲ್ಲಾ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ.

ಸಿಎಂ ಚನ್ನಿ ಅವರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದೇನೆ. ಪ್ರಧಾನಿ ಮೋದಿಯವರು ಬರೀ ಬಿಜೆಪಿಗರಿಗೆ ಮಾತ್ರ ಅಲ್ಲ ಇಡೀ ದೇಶಕ್ಕೆ ಪ್ರಧಾನಿ. ಪ್ರಧಾನಿ ಮೋದಿ ಬಗ್ಗೆ ನನಗೂ ಆತಂಕ ಇತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *