ತಂದೆಯ ಸ್ಥಿತಿ ಕಂಡು ವೇದಿಕೆ ಮೇಲೆಯೇ ಕಣ್ಣೀರಿಟ್ಟ ಹೆಚ್ಡಿಕೆ : ಅಷ್ಟಕ್ಕೂ ದೇವೇಗೌಡರಿಗೆ ಆಗಿದ್ದೇನು..?

1 Min Read

 

ಮಂಡ್ಯ: ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಚೀಣ್ಯ ಗ್ರಾಮದಲ್ಲಿ ಜೆಡಿಎಸ್ ಸಮಾವೇಶ ಸಮಾರಂಭ ನಡೆದಿದೆ. ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಬರುವುದಕ್ಕೆ ಆಗಿಲ್ಲ. ಆದರೆ ವೇದಿಕೆಯ ಮೇಲೆ ದೊಡ್ಡ ಪರದೆಯ ಮೇಲೆ ಕಂಡಾಗ, ಕುಮಾರಸ್ವಾಮಿ ಭಾವುಕರಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಅನಾರೋಗ್ಯ ಎದುರಾಗಿದೆ. ಈ ಹಿನ್ನೆಲೆ ಅವರು ಎಲ್ಲಿಯೂ ಹೋಗಿಲ್ಲ. ಇದೇ ಸಂದರ್ಭದಲ್ಲಿ ಜೆಡಿಎಸ್ ಸಮಾರಂಭ ನಡೆದಿದ್ದು, ಆ ಸಮಾರಂಭಕ್ಕೂ ಹೋಗುವುದಕ್ಕೆ ಆಗಿಲ್ಲ. ದೊಡ್ಡ ಸಮಾರಂಭದಲ್ಲಿ ತಂದೆಯ ಅನುಪಸ್ಥಿತಿ ಕುಮಾರಸ್ವಾಮಿ ಅವರನ್ನು ಕಾಡಿದೆ.

ಕಾರ್ಯಕ್ರಮಕ್ಕೆ ದೇವೇಗೌಡ ಅವರು ಬಾರದೆ ಇದ್ದರು, ಅವರಿಗೆ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಮನೆಯಲ್ಲಿಯೇ ಕೂತು ಸಮಾರಂಭ ನೋಡಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲೂ ದೇವೇಗೌಡ ಅವರ ಚಿತ್ರಣ ಮೂಡಿದೆ. ಇದನ್ನು ಕಂಡು ಕುಮಾರಸ್ವಾಮಿ ಅವರು ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *